ಶ್ರೀ ಶಾರದಾಂಭಿಕಾ ಭಜನಾ ಸೇವಾ ಸಂಘ (ರಿ) ಶಾರದಾನಗರ -ಏಕಾಹ ಭಜನೆ…

ಬಂಟ್ವಾಳ: ಶ್ರೀ ಶಾರದಾಂಭಿಕಾ ಭಜನಾ ಸೇವಾ ಸಂಘ (ರಿ) ಶಾರದಾನಗರ ಇದರ 63 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಏಕಾಹ ಭಜನೆಯ ಪ್ರಾರಂಭವು ನಂದಾದೀಪದ ಪ್ರಜ್ವಲನೆಯೊಂದಿಗೆ ಆರಂಭಗೊಂಡಿತು.
ಮುನ್ನೂರು ಮಾಗಣೆಯ ತಂತ್ರಿಗಳಾದ ಶ್ರೀ ಸೂರ್ಯನಾರಾಯಣ ಭಟ್ ಹಾಗೂ ಸಜೀಪ ಮಾಗಣೆ ತಂತ್ರಿಗಳಾದ ಶ್ರೀ ಸುಬ್ರಹ್ಮಣ್ಯ ಭಟ್ ಮಜಿನಡ್ಕ ರವರು ನಂದಾದೀಪ ಪ್ರಜ್ವಲಿಸುವ ಮೂಲಕ 63 ನೇ ಏಕಾಹ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಭಜನಾ ಮಂದಿರದ ಗೌರವಾಧ್ಯಕ್ಷರಾದ ಶ್ರೀ ಶೇಖರ್ ಪೂಜಾರಿ ಶಾರದಾನಗರ, ಪುರಂದರ ಕುಲಾಲ್ ಮಂಜಲ್ಪಾದೆ, ತನಿಯಪ್ಪ ಪೂಜಾರಿ ಅಂಬಡೆಬೈಲ್, ಜಯಂತ ಗಟ್ಟಿ ಆಲಾಡಿ, ತಿಮ್ಮಪ್ಪ ಕುಲಾಲ್ ಕೇಕುನಾರಬೆಟ್ಟು, ಅಧ್ಯಕ್ಷರಾದ ಸೋಮಶೇಖರ್ ಆಲಾಡಿ ಹಾಗೂ ಸದಸ್ಯರಾದ ಯಶೋಧರ ಕೊಟ್ಟಾರಿ, ವಿಶ್ವನಾಥ ಕೊಟ್ಟಾರಿ, ಚಂದ್ರಶೇಖರ ಭಂಡಾರಿ, ರಾಮಕೃಷ್ಣ ಕೊಟ್ಟಾರಿ, ಸತೀಶ್ ಗಟ್ಟಿ ಆಲಾಡಿ, ಲತೇಶ್ ಪೂಜಾರಿ ಶಾರದಾನಗರ, ಉಮೇಶ್ ಪೂಜಾರಿ ಶಾರದಾನಗರ, ರಂಜಿತ್ ಕುಡಾರ್ಲಚ್ಚಿಲ್, ಗಂಗಾಧರ ಗಟ್ಟಿ ಮಂಜಲ್ಪಾದೆ, ಯಶವಂತ ಗಟ್ಟಿ ಆಲಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Sponsors

Related Articles

Back to top button