ಶ್ರೀ ಬಿಲ್ಲಂಪದವು ಕಾಳಾದ್ರಿ ಸಾನಿಧ್ಯ – ಕಾರ್ತಿಕ ಮಾಸ ದೀಪಾರಾಧನೆ ಸಂಪನ್ನ…

ಬಂಟ್ವಾಳ: ಸಜಿಪ ಮಾಗಣೆ ಶ್ರೀ ಬಿಲ್ಲಂಪದವು ಕಾಳಾದ್ರಿ ಸಾನಿಧ್ಯ ಒಂದು ತಿಂಗಳ ಪರ್ಯಂತ ಜರಗಿದ ಕಾರ್ತಿಕ ಮಾಸ ದೀಪಾರಾಧನೆ ಡಿ. 12 ರಂದು ವಿಜೃಂಭಣೆಯಿಂದ ಅನ್ನದಾನದೊಂದಿಗೆ ಸಂಪನ್ನಗೊಂಡಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮುಳ್ಳಂಜ ವೆಂಕಟೇಶ್ವರ ಭಟ್, ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೊಚು ಬಂಡಾರಿ, ಕೆ ರಾಧಾಕೃಷ್ಣ ಆಳ್ವ, ಪ್ರವೀಣ್ ಆಳ್ವ, ಕೆ ಟಿ ಸುಧಾಕರ, ಸೋಮನಾಥ ಬಂಡಾರಿ, ಪ್ರದೀಪ್ ಶೆಟ್ಟಿ, ಪ್ರದೀಪ್ ಭಂಡಾರಿ, ಗಣೇಶ್ ಶೆಟ್ಟಿ, ವಿಠಲ, ಯಶವಂತ ದೇರಾಜೆ ಗುತ್ತು ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button