ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ…

ಬಂಟ್ವಾಳ: ಸಜೀಪಮೂಡ ಪೆಲತ್ತಕಟ್ಟೆಯಲ್ಲಿ ದುರ್ಗಾಪರಮೇಶ್ವರಿ ಭಕ್ತ ವೃಂದದವರಿಂದ ಮಾರ್ಚ್ 14 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಮಂಡಳಿಯವರಿಂದ ನಡೆಯಲಿರುವ ಐದನೇ ವರ್ಷದ ಯಕ್ಷಗಾನ ‘ಶ್ರೀದೇವಿ ಮಹಾತ್ಮೆ’ ಬಯಲಾಟದ ಆಮಂತ್ರಣ ಪತ್ರವನ್ನು ಫೆ. 7 ರಂದು ಬಿಡುಗಡೆಗೊಳಿಸಲಾಯಿತು.
ಶ್ರೀಕ್ಷೇತ್ರ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಂಬಾ ಕ್ಷೇತ್ರದಲ್ಲಿ ಕ್ಷೇತ್ರದ ಅರ್ಚಕ ಮಹೇಶ್ ಭಟ್ ಬಿಡುಗಡೆಗೊಳಿಸಿದರು. ಎo ಸುಬ್ರಹ್ಮಣ್ಯ ಭಟ್, ಅರವಿಂದ ಭಟ್, ಯಶವಂತ ದೇರಾಜೆ, ಅರುಣ್ ಕುಮಾರ್, ನವೀನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button