ಕೇರಳ ಸಚಿವ ಅಹಮ್ಮದ್ ದೇವರಕೋವಿಲ್ ಪೇರಡ್ಕ ಭೇಟಿ…

ಸುಳ್ಯ: ಕೇರಳ ಸರಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರಕೋವಿಲ್ ರವರು ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಗೆ ಬೇಟಿ ನೀಡಿ ಮರಣ ಹೊಂದಿದ ತೆಕ್ಕಿಲ್ ಕುಟುಂಬಸ್ಥರ ಖಬರ್ ಝಿಯಾರತ್ ಮತ್ತು ಪ್ರಾರ್ಥನಾ ಸಂಘಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಸೀದಿ ವತಿಯಿಂದ ಸಚಿವರನ್ನು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ ಹಮೀದ್ ರವರು ಶಾಲು ಹೊದಿಸಿ ಸನ್ಮಾಸಿನಿಸಿದರು. ಖತೀಬರಾದ ಬಹು| ರಿಯಾಝ್ ಪೈಝಿ ದುವಾ ನೆರವೇರಿಸಿದರು. ಈ ಸಂಧರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಮಾಅತ್ ಕಾರ್ಯದರ್ಶಿ ಪಿ.ಕೆ ಉಮ್ಮರ್, ಮಾಜಿ ಅಧ್ಯಕ್ಷ ಆರಿಫ್ ತೆಕ್ಕಿಲ್ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್.ಕೆ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

whatsapp image 2023 07 26 at 5.58.48 pm
Sponsors

Related Articles

Back to top button