ದೆಹಲಿ ಕರ್ನಾಟಕ ಭವನದಲ್ಲಿ ಚುಟುಕು ಕವಿಗೋಷ್ಠಿ….

ಮಂಗಳೂರು: ದೆಹಲಿ ಕರ್ನಾಟಕ ಸಂಘ ಮತ್ತು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನವದೆಹಲಿಯಲ್ಲಿ ಏರ್ಪಡಿಸಲಾದ ಚುಟುಕು ಸಾಹಿತ್ಯ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆ ಸಂಚಾಲಕ ವೇ.ಮೂ. ಎಂ. ಜನಾರ್ದನ ಭಟ್ ವಹಿಸಿದ್ದರು.
ಡಾ. ಪುರುಷೊತ್ತಮ ಬಿಳಿಮಲೆ, ಡಾ. ವಸಂತ ಶೆಟ್ಟಿ ಬೆಳ್ಳಾರೆ, ಡಾ. ಅವನೀಂದ್ರ ನಾಥ ರಾವ್, ಸಿ.ಎಮ್ ನಾಗರಾಜ, ಜಿಲ್ಲಾ ಚುಸಾ.ಪ. ಗೌರವಾಧ್ಯಕ್ಷ ಇರಾ ನೇಮು ಪೂಜಾರಿ , ಅಧ್ಯಕ್ಷ ಚಲನಚಿತ್ರ ನಟ ತಾರನಾಥ ಬೋಳಾರ, ಕಾರ್ಯದರ್ಶಿ ಹ.ಸು. ಒಡ್ಡಂಬೆಟ್ಟು, ಉಪನ್ಯಾಸಕ ಹಿರಿಯಕವಿ ಜಯಾನಂದ ಪೆರಾಜೆ, ಪತ್ರಕರ್ತ ಕವಿ ರಾಧಾಕೃಷ್ಣ ಉಳಿಯತಡ್ಕ, ಕವಿ ಮಿತ್ರರ ವೇದಿಕೆ ಸಂಚಾಲಕ ಸುಭಾಶ್ ಪೆರ್ಲ, ಡಾ. ಎಮ್. ಜಗದೀಶ ಶೆಟ್ಟಿ ಬಿಜೈ, ಪರಿಸರ ಪ್ರೇಮಿ ಮಾಧವ ಉಳ್ಳಾಲ, ಡಾ. ರತ್ನ ಹಾಲಪ್ಪ ಗೌಡ ಉಪಸ್ಥಿತರಿದ್ದರು. ಅಂತಾರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಕರ್ನಾಟಕ, ಕೇರಳ ರಾಜ್ಯದ 28 ಕವಿಗಳು ಸ್ವರಚಿತ ಕವನ ,ಚುಟುಕು ವಾಚಿಸಿದರು. ವಿಜಯಲಕ್ಷ್ಮೀ ಕಟೀಲು ನಿರೂಪಿಸಿ, ಶಾಂತಾ ಪುತ್ತೂರು ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button