ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ- ಜಾತ್ರೆ ಹಾಗೂ ಷಷ್ಟಿ ಮಹೋತ್ಸವ ಆಮಂತ್ರಣ ಪತ್ರ ಬಿಡುಗಡೆ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ಇದರ ಜಾತ್ರಾ ಮಹೋತ್ಸವ ಹಾಗೂ ಸುಬ್ರಮಣ್ಯ ಷಷ್ಟಿ ಮಹೋತ್ಸವ ಆಮಂತ್ರಣ ಪತ್ರವನ್ನು ಶನಿವಾರದಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶ್ರೀ ಕ್ಷೇತ್ರದಲ್ಲಿ ಜರಗಿದ ರಂಗ ಪೂಜಾ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಅರ್ಚಕ ಕೃಷ್ಣ ಭಟ್, ಸಮಿತಿ ಸದಸ್ಯರಾದ ಎನ್ ಕೆ ಶಿವ, ಹರಿಪ್ರಸಾದ್ ಭಂಡಾರಿ, ರಾಜು ಪೂಜಾರಿ, ಚಿತ್ರ ಎಸ್ ರೈ, ಶ್ರೀನಿವಾಸ್ ನಾಯಕ್, ಸುಪ್ರಭಾ ಬಾಸ್ರಿ ತಾಯ, ತಿಲಕ್, ಧನೇಶ್ವರ ರಾವ್, ಉಮೇಶ್ ರಾವ್, ಪ್ರಸಾದ್ ನಾಯಕ್, ವಿಜಯ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button