ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ – ಯಕ್ಷಗಾನ ತಾಳಮದ್ದಳೆ…

ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ( ರಿ) ಮಡಿಪು ಇವರಿಂದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ಇಲ್ಲಿ ಸೆ. 29 ರಂದು ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಥಾ ಪೂಜೆ ಸಂದರ್ಭದಲ್ಲಿ ಕಾಂತಾಡಿ ಗುತ್ತು ಕೆ ಸೀತಾರಾಮ ಶೆಟ್ಟಿ ಪ್ರಾಯೋಜಕತ್ವದಲ್ಲಿ ಕರ್ಣ ಶಲ್ಯ ಎಂಬ ಪೌರಾಣಿಕ ಕಥಾ ಭಾಗ ಯಕ್ಷಗಾನ ತಾಳಮದ್ದಳೆ ನಡೆಯಿತು.

ಕಲಾವಿದರಾದ ಜಿಕೆ ನಾವಡ ಬಾಯಾರು, ಪ್ರಶಾಂತ್ ಹೊಳ್ಳ, ಜಬ್ಬಾರ್ ಸಮೋ, ಕೃಷ್ಣ ಚೈತನ್ಯ ಚೇರಲ್, ಕುಶಲ ಮುಡಿಪು, ರಾಮಮೂರ್ತಿ ಕುದ್ರೆ ಕೊಡ್ಲು ಕೂಡುವಿಕೆಯಿಂದ ತಾಳಮದ್ದಳೆ ಜರಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳುoಜ ವೆಂಕಟೇಶ್ವರ ಭಟ್, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕೆ ರಾಧಾಕೃಷ್ಣ ಆಳ್ವ, ಗಣಪತಿ ಭಟ್, ಪ್ರವೀಣ್ ಬಂಡಾರಿ, ಕಿಶನ್ ಸೇನವ, ಸುಧಾಕರ್, ಶುಭಾಷ್ ಕೆ, ಸೀತಾರಾಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button