ಕನ್ನಡ ಭವನದ ಕನ್ನಡಪರ ಚಟುವಟಿಕೆ ಅನುಕರಣೀಯ -ಪ್ರದೀಪ್ ಕುಮಾರ್ ಕಲ್ಕೂರ…

ವರದಿ:ಜಯಾನಂದ ಪೆರಾಜೆ ಮಂಗಳೂರು
ಮಂಗಳೂರು:ಕನ್ನಡ ಭವನದ ಕನ್ನಡಪರ ಚಟುವಟಿಕೆಗಳು ಅನುಕರಣೀಯ ಹಾಗೂ ಶ್ಲಾಘನೀಯ. ಹಿರಿಯರನ್ನು ಗೌರವಿಸಿ, ಪ್ರತಿಭಾವಂತರನ್ನು ಪುರಸ್ಕರಿಸಿ, ಯುವ ಪ್ರತಿಭೆಗಳನ್ನು “ಭರವಸೆಯ ಬೆಳಕು “ಎಂಬ ಅರ್ಹ ನಾಮದ ಪ್ರಶಸ್ತಿ ನೀಡಿ, ವಿವಿಧ ಸಮಾನ ಮನಸ್ಕ ಸಂಘಟನೆಗಳನ್ನು, ಸಂಘಟಕರನ್ನು ಒಂದೇ ವೇದಿಕೆಯಡಿ ತೊಡಗಿಸಿ ಕೊಳ್ಳಲು ಅವಕಾಶ ಮಾಡಿಕೊಡುವ ವಾಮನ್ ರಾವ್ ಬೇಕಲರ ಕನ್ನಡಪರ ಚಟುವಟಿಕೆಗಳಿಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಜತೆಗೂಡಿ ಪರಸ್ಪರ ಕೈ ಜೋಡಿಸಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವ, ಬೆಳೆಸುವ ಕೆಲಸ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್, ನಿಕಟಪೂರ್ವ ಅಧ್ಯಕ್ಷ , ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಅವರು ಮೇ.25 ರಂದು ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾ ಭವನದಲ್ಲಿ ನಡೆದ ಡಾ. ವಾಮನ್ ರಾವ್ ಸಾರಥ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ಕನ್ನಡ ಧ್ವಜ ಜಿಲ್ಲಾ ಅಧ್ಯಕ್ಷೆ ರೇಖಾ ಸುದೇಶ್ ರಾವ್ ಅವರಿಗೆ ನೀಡಿ ಉದ್ಘಾಟಿಸಿದರು.
ಕನ್ನಡ ಭವನ ದ. ಕ. ಜಿಲ್ಲಾ ಗೌರವ ಅಧ್ಯಕ್ಷ ಡಾ. ರವೀಂದ್ರ ಜೆಪ್ಪು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಡಾ. ಉದಯಕುಮಾರ್,ಶುಭ ಹಾರೈಸಿದರು.ವಿಧಾನಸಭಾ ಮಾಜಿ ಸಚೇತಕರಾದ ಕ್ಯಾ. ಗಣೇಶ್ ಕಾರ್ಣಿಕ್ ಕನ್ನಡ ಭವನದ ಕಾರ್ಯ ಚಟುವಟಿಕೆ ಗಳ ಬಗ್ಗೆ ಅಭಿಮಾನ ದಿಂದ ಮಾತನಾಡಿ “ಕನ್ನಡ ಕಟ್ಟುವುದರೊಂದಿಗೆ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಯುವಜನರು ಮಾಡಬೇಕು ಎಂದರು.
ಅತಿಥಿಗಳಾಗಿ, ದ.ಕ.ಜಿಲ್ಲಾ ಕನ್ನಡ ಚು. ಸಾ. ಪ. ಅಧ್ಯಕ್ಷ ಡಾ. ಕೊಳಚಪ್ಪೆ ಗೋವಿಂದ ಭಟ್,ಓಜಸ್ ಸಂಸ್ಥೆ ಅಧ್ಯಕ್ಷೆ ಮಂಗಳ ಎನ್. ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ರಾಷ್ಟ್ರೀಯ ಸಾ. ಸಾ. ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಗಂಗಾಧರ್ ಗಾಂಧಿ, ಅಮೃತ ಪ್ರಕಾಶ ಪತ್ರಿಕೆ ಅಧ್ಯಕ್ಷೆ ಡಾ. ಮಾಲತಿ ಶೆಟ್ಟಿ ಮಾಣೂರು, ಪ್ರಕಾಶ್ ಚಂದ್ರ ಉಳ್ಳಾಲ, ಶೋಭಾ ಲೋಕೇಶ್, ಚಂದ್ರಕಾಂತ್ ಮಾತನಾಡಿದರು. ಹಿರಿಯ ಸಾಹಿತಿಗಳಾದ ಡಾ. ಶಿವಾನಂದ ಬೇಕಲ್, ಕ್ಯಾ. ಗಣೇಶ್ ಕಾರ್ಣಿಕರಿಗೆ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2025.”ನೀಡಿ ಗೌರವಿಸಲಾಯಿತು.
ಜಿಲ್ಲೆಯ ಹಿರಿಯ ಸಮಾಜ ಸೇವಾ ನಿರತ ನಾಡೋಜ ಡಾ. ಕೃಷ್ಣಪ್ರಸಾದ್ ನೇತ್ರಾಲಯ, ಜೆ. ಕೆ. ರಾವ್ ಮಂಗಳೂರು ,ಯೋಗೀಶ್ ಕುಮಾರ್ ಜೆಪ್ಪು, ಡಾ. ಉದಯಕುಮಾರ್, ಡಾ. ಮಂಜುಳಾ ಅನಿಲ್ ರಾವ್, ಡಾ. ಕೆ. ವಿ. ದೇವಪ್ಪ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ “ಸಮಾಜ ಸೇವಾ ರತ್ನ ಪ್ರಶಸ್ತಿ 2025 ನೀಡಲಾಯಿತು.
ರತ್ನಾ ಟೀಚರ್ ಜೋಗಟ್ಟೆ, ಶಾರದಾ ಮೊಳೆಯಾರ್, ಜ್ಯೋತ್ಸ್ನಾ ನುಳ್ಳಿಪ್ಪಾಡಿ, ಜನಾರ್ದನ್ ಎಚ್. ಎಸ್,ಮಂಜುನಾಥ್ ಕೆ. ಬೈಲೂರ್, ರಾಜನ್ ಮುನಿಯೂರ್, ಪ್ರವೀಣ್ ಕುಲಕರ್ಣಿ ಬಿದಿಗೆಚಂದ್ರ, ಶರಣ್ ಬೇಕಲ್ ರಿಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ “ನೀಡಿ ಪುರಸ್ಕರಿಸಲಾಯಿತು.
ಏಶಿಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ನ್ಯೂ ಏಶಿಯನ್ ಚಾಂಪಿಯನ್ ಶಿಪ್ ಪಡೆದ ಕು. ನಾಗಶ್ರೀ ಗಣೇಶ್ ಉಪ್ಪಿನಕುದ್ರು ಇವರಿಗೆ ದಿ. ಲೈಟ್ ಒಫ್ ಹೋಪ್ಸ್ -ಅಚೀವ್ಮೆಂಟ್ ಅವಾರ್ಡ್ “ನೀಡಿ, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಮೆರೆದ ಕೃತಿ ಬೇಕಲ್, ಜ್ಞಾನೇಶ್ ಬೇಕಲ್, ಐಶ್ವರ್ಯ ಆರ್, ಇಂಚರ, ಕೃತಿ, ಮನೀಶ್ ರಾವ್ ಆರ್. ಬಿ. ಹವೀಶ್ ಆರ್, ಗಣೇಶ್ ರಾಜ್ ಕೆ. ಎಂ. ಡ್ಯಾಫ್ನ ಕೆ. ವಿ., ಧ್ಯಾನ್ ಮದ್ದೋಡಿ, ದೀಕ್ಷಿತಾ ವಿ., ಭುವಿ, ನಿತ್ಯ, ಶಿವಾನಿ ದಿನೇಶ್ ರಾವ್, ಕು. ಮಾನ್ಯ, ಸಾಗರಿ ಎಸ್, ನಿನಾದ, ದೀಕ್ಷಾ ಡಿ. ರಾವ್, ಸುಪ್ರೀತಾ ರಾವ್ ಬಿ, ಸಾತ್ವಿಕ್ ಕೆ. ಸಾನ್ವಿ ಗುರುಪುರ, ಸಾಕ್ಷಿ, ಸಾದ್ವಿನಿ, ವೈಷ್ಣವಿ ವಿ. ಬೇಕಲ್, ವೈಶಾಕ್ ಕುಮಾರ್, ತನುಷ್ ಕೆ., ಸ್ವಸ್ತಿಕ್ ಆರ್, ಯಕ್ಷತ್ ಶೆಟ್ಟಿ, ಚಿರಸ್ವಿ ಕೆ. ಜಿ., ಶ್ರೇಯ ಕೃಷ್ಣ, ಇವರಿಗೆ ಯುವ ಪ್ರತಿಭಾ ಪ್ರಶಸ್ತಿಯಾದ “ಭರವಸೆಯ ಬೆಳಕು 2025.ನೀಡಲಾಯಿತು.
ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದ ರು. ಪ್ರದೀಪ್ ಬೇಕಲ್ ಪ್ರಾಸ್ತಾವಿಕ,ವೈಶಾಕ್ ಕುಮಾರ್ ನಿರೂಪಣೆ, ಉಮೇಶ್ ರಾವ್ ಕುಂಬ್ಳೆ ವಂದಿಸಿದರು. ಡಾ. ವಾಣಿಶ್ರೀ ಕಾಸರಗೋಡು ನೆತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಯ ಕಲಾವಿದರ ನೃತ್ಯ, ಗಾನ ವೈಭವ ಕಾರ್ಯಕ್ರಮ ನಡೆಯಿತು.