ಸಜಿಪ ಮಾಗಣೆ ಮಿತ್ತಮಜಲು ಕ್ಷೇತ್ರದ ಅಶ್ವತ್ಥಮರ ಕಟ್ಟೆ ಶಿಲಾಮಯವಾಗಿ ನವೀಕರಣ…

ಬಂಟ್ವಾಳ; ಸಜಿಪ ಮಾಗಣೆ ಮಿತ್ತಮಜಲು ಕ್ಷೇತ್ರದ ಪುರಾತನ ಅಶ್ವತ್ಥಮರ ಕಟ್ಟೆ ಶಿಲಾಮಯವಾಗಿ ನವೀಕರಣ ನಿಮಿತ್ತ ಪುಣ್ಯಹ ,ಸ್ಥಳ ಶುದ್ದಿ, ವಾಸ್ತು ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶನಿವಾರದಂದು ಜರಗಿತು.
ಗಡಿ ಪ್ರಧಾನರಾದ ಮುಂಡ ಪ್ಪ ಶೆಟ್ಟಿ ಯಾನೆ ಕೋಚು ಬಂಡಾರಿ, ಗುತ್ತು ಮನೆತನದ ಪ್ರಮುಖರಾದ ಅಜಿತ್ ಜೈ ನ್, ಶಿವರಾಮ ಭಂಡಾರಿ, ಯಶೋಧರ ರೈ, ಶ್ರೀನಾಥ್ ಶೆಟ್ಟಿ, ಕೃಷ್ಣ ಶೆಟ್ಟಿ, ಕೋಚು ಪೂಜಾರಿ ಯಾನೆ ಶಂಕರ ಪೂಜಾರಿ, ದಯಾನಂದ ಪೂಜಾರಿ, ವಾಸುದೇವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.