ಮಾನವ ಮತ್ತು ಪರಿಸರ ಪ್ರಜ್ಞೆ – ಪ್ರಬಂಧ ಸ್ಪರ್ಧೆಗೆ ಆಹ್ವಾನ…

ಬಂಟ್ವಾಳ: ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ವತಿಯಿಂದ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಜರಗಲಿರುವ ಹಲಸು ಹಾಗೂ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳ ಹಾಗೂ ಗಿಡಗಳ ಪ್ರದರ್ಶನ ಮತ್ತು ಮಾರಾಟಗಳ ಬೃಹತ್ ಮೇಳದಲ್ಲಿ ಸಾರ್ಜನಿಕರಿಗೆ ಮತ್ತು ಶಾಲಾಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಸಕ್ತರು ಸ್ಪರ್ಧೆಯ ದಿನಾಂಕ ಆ.3ರಂದು ಅಪರಾಹ್ನ 3ಗಂಟೆಗೆ ಸ್ಪರ್ಶ ಕಲಾಮಂದಿರ ಬಿಸಿರೋಡಿನಲ್ಲಿ ಹಾಜರಾಗುವುದು. ಉತ್ತಮ ಪ್ರಬಂಧಗಳ 8 ಮಂದಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ಆ.4ರಂದು ನಡೆಯುವ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವುದು.
ವಿಷಯ: ಮಾನವ ಮತ್ತು ಪರಿಸರ ಪ್ರಜ್ಞೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಘಟಕಾಧ್ಯಕ್ಷ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಸಕ್ತರು ದೂರವಾಣಿ 77601 39820, 88612 81571 ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.

Sponsors

Related Articles

Back to top button