ತೊಡಿಕಾನ ಗ್ರಾಮದ ರಸ್ತೆಗಳಿಗೆ ಅನುದಾನ ಒದಗಿಸಲು ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ ಮನವಿ…

ಸುಳ್ಯ: :ತೊಡಿಕಾನ ಗ್ರಾಮದ ವಿವಿಧ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ತೊಡಿಕಾನ ಗ್ರಾಮದ ಪ್ರಮುಖರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ ಜೂನ್ 12 ರಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ, ಶಶಿಧರ ತೊಡಿಕಾನ, ದೇವಸ್ಥಾನ ಸಮಿತಿ ಸದಸ್ಯ ತಿಮ್ಮಯ್ಯ ಮೆತ್ತಡ್ಕ, ಬಾಲಕೃಷ್ಣ ಕುಂಟುಕಾಡು, ವೆಂಕಟೇಶ್ ಕುಂಟುಕಾಡು ಉಪಸ್ಥಿತರಿದ್ದರು.