ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ – ಲಕ್ಷದೀಪೋತ್ಸವ…

ಬಂಟ್ವಾಳ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜೀಪಮುನ್ನೂರು ಇಲ್ಲಿ ವರ್ಷಂಪ್ರತಿಯಂತೆ ಲಕ್ಷದೀಪೋತ್ಸವದ ಅಂಗವಾಗಿ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ಪವಮಾನ ಸೂಕ್ತ ಅಭಿಷೇಕ, ಪ್ರಸನ್ನ ಪೂಜೆ, ಕಲ್ಪೋಕ್ತ ಪೂಜೆ ಮಹಾಮಂಗಳಾರತಿ, ಅನ್ನದಾನ ಶ್ರದ್ಧಾಭಕ್ತಿಯಿಂದ ಜರುಗಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣ ಶಾಮ್, ಸಜೀಪಮುನ್ನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವ ಗುಂಡಪ್ಪ ಬಿರಾದಾರ, ಬಿ ಕೇಶವ ಭಟ್, ಎo ಸುಬ್ರಹ್ಮಣ್ಯ ಭಟ್, ಕೆ ನಾರಾಯಣ ಐತಾಳ, ಸಂತೋಷ, ಗಣೇಶ, ಗೀತೇಶ್ ಗಟ್ಟಿ, ಮನೋಜ್ ಆಳ್ವ, ಕುಸುಮ, ಪ್ರಮೀಳಾ ಗಟ್ಟಿ, ನರೇಂದ್ರ ಆಳ್ವ, ಪುರಂದರ, ಚಂದ್ರಶೇಖರ, ಯಶವಂತ ಗಟ್ಟಿ, ವಿಶ್ವನಾಥ ಕೊಟ್ಟಾರಿ, ಮೊದಲಾದವರು ಉಪಸ್ಥಿತರಿದ್ದರು.
ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಭಜನಾ ಮಂಡಳಿಯವರಿಂದ ಹಾಗೂ ಶಾರದಾ ಅಂಬಿಕಾ ಭಜನಾ ಮಂಡಳಿ ಶಾರದಾ ನಗರ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ಜರಗಿತು.

Related Articles

Leave a Reply

Your email address will not be published. Required fields are marked *

Back to top button