ಅಭಿನಯ ಕಲಾವಿದರ ಅಭಿನಯದ ವಿಭಿನ್ನ ಶೈಲಿಯ “ಶಾಂಭವಿ” ನಾಟಕ…

ಬಂಟ್ವಾಳ: ಕ್ಯಾನ್ಸರ್ ಹಾಗೂ ಅಶಕ್ತ ರೋಗಿಗಳಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಉಡುಪಿ ಜಿಲ್ಲೆಯ ಅಭಿನಯ ಕಲಾವಿದರ ಅಭಿನಯದ ವಿಭಿನ್ನ ಶೈಲಿಯ “ಶಾಂಭವಿ” ನಾಟಕ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಿನ 6 ಕುಟುಂಬಗಳಿಗೆ ರೂ. 30 ಸಾವಿರ ರೂ ಧನ ಸಹಾಯ ನೀಡಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಜಯಪ್ರಕಾಶ್, ಭರತ್ ಕುಮ್ಡೆಲು, ಉಮೇಶ್ ಕುಲಾಲ್, ಅಶೋಕ ಕುಮಾರ್ ಹೊಸಮಾರು, ಶರತ್ ಕುಮಾರ್, ಶಿವಾನಂದ ,ಯಶವಂತ ಬಿಸಿರೋಡು, ಹರೀಶ್ ಪೂಜಾರಿ ಜಕ್ರಿಬೆಟ್ಟು ಉಪಸ್ಥಿತರಿದ್ದರು.