ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ…

ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದಿವಂಗತ ದೇವರಾಜ ಅರಸು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಅವರು ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು ಮತ್ತು ಟೆಲಿಕಾಂ ಕ್ರಾಂತಿಯ ಪಿತಾಮಹ ರಾಜೀವ್ ಗಾಂಧಿ ಯವರ ಕೊಡುಗೆ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾoಬಾರು, ಕಾಂಗ್ರೆಸ್ ಮುಖoಡ ರುಗಳಾದ ರಾಜೀವಿ ಆರ್ ರೈ, ನಂದರಾಜ್ ಸಂಕೇಶ, ದಿನೇಶ್ ಅಂಬೆಕಲ್ಲು, ಪವಾಜ್ ಕನಕಮಜಲು, ಸುರೇಶ ಅಮೈ, ಸುರೇಶ್ ಕಾಮತ್ ಜಯನಗರ, ರಂಜಿತ್ ರೈ ಮೇನಾಲ, ಭವಾನಿ ಶಂಕರ ಕಲ್ಮಡ್ಕ, ಜಯಪ್ರಕಾಶ್ ನೆಕ್ರಪ್ಪಾಡಿ, ಸಿದ್ದೀಕ್ ಕ್ಕೋಕೋ, ಮಂಜುನಾಥ್ ಮಡ್ತಿಲ, ಝುಬೈರ್ ಆರಂತೋಡು ಮೊದಲಾದವರು ಉಪಸ್ಥಿತರಿದ್ದರು

Sponsors

Related Articles

Back to top button