ಬಂಟ್ವಾಳ ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೃಹತ್ ಪ್ರತಿಭಟನೆ…

ಬಂಟ್ವಾಳ : ದೇಶ ದ್ರೋಹದ ಹೇಳಿಕೆ,ರಾಜ್ಯಪಾಲರ ವಿರುದ್ಧ ಅವಾಚ್ಯ ಶಬ್ದದ ಬಳಕೆಯ ವಿರುದ್ಧ ಬಂಟ್ವಾಳ ಯುವ ಮೋರ್ಚಾದ ವತಿಯಿಂದ ಬಿಸಿರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಸಕ ‌ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಆ.28 ರಂದು ನಡೆಯಿತು.
ರಸ್ತೆ ತಡೆ ಮಾಡಿ ಸರಕಾರದ ವಿರುದ್ಧ,ಮುಖ್ಯ ಮಂತ್ರಿ ವಿರುದ್ದ ಪ್ರತಿಭಟನೆ ಕಾರರು ದಿಕ್ಕಾರ ಕೂಗಿದರು.
ವಿಕಾಸ್ ಪುತ್ತೂರು ಮಾತನಾಡಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಓರ್ವ ‌ಅಯೋಗ್ಯ ಮುಖ್ಯ ಮಂತ್ರಿಯಾಗಿದ್ದು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಒಬ್ಬ ಶಾಸಕ ಹೇಗಿರಬಾರದು ಎಂಬುದಕ್ಕೆ ಐವನ್ ಡಿಸೋಜ ಉದಾಹರಣೆಯಾಗಿದ್ದಾರೆ. ದೇಶದ್ರೋಹದ ಹೇಳಿಕೆ ನೀಡಿದ್ದರ ವಿರುದ್ಧ ದೂರು ನೀಡಿದರೂ ಪೊಲೀಸರು ಎಫ್ಐಆರ್ ಹಾಕುವುದಿಲ್ಲ.ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬೆಲೆ ಏರಿಕೆಯಾಗುತ್ತಿದೆ.ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು. ಎಸ್ಡಿಪಿಐ ಜೊತೆಗೆ ಕೈಜೋಡಿಸಿರುವ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದರು.
ಬಂಟ್ವಾಳ ಬಿಜೆಪಿ ಮಂಡಲಾಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ಯುವಮೋರ್ಚಾ ಅಧ್ಯಕ್ಷ ದಿನೇಶ ಶೆಟ್ಟಿ ,ಹಿರಿಯ ಬಿಜೆಪಿ ಮುಖಂಡರು,ಹಾಗೂ‌ ಯುವ ಮೋರ್ಚಾದ ಪದಾಧಿಕಾರಿಗಳಿದ್ದರು.

whatsapp image 2024 08 28 at 10.02.13 pm (1)

Sponsors

Related Articles

Back to top button