ಸೂಡ ಅಧ್ಯಕ್ಷ ರಿಂದ ಕಂದಾಯ ಸಚಿವರಿಗೆ ಮನವಿ…

ಸುಳ್ಯ: ಕರ್ನಾಟಕ ಸರ್ಕಾರದ ಮಹತ್ವಾಕಾoಕ್ಷಿ ಯೋಜನೆಯಾದ ಅಕ್ರಮ ಸಕ್ರಮ ದರ್ಕಾಸ್ ಫೈಲ್ ಗಳ ಪ್ಲಾಟಿಂಗ್ ಮಾಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಬಹುಕಾಲದ ಬೇಡಿಕೆಯನ್ನು ಸರಕಾರ ಈಡೇರಿಸಿರುವುದು ಅಭಿನಂದನಾರ್ಹ. ಆದರೆ ನಗರ ವ್ಯಾಪ್ತಿಯಲ್ಲಿ 1996 ರ ಮುಂಚಿತವಾಗಿ ಮಂಜೂರಾದ ಕಡತಗಳಿಗೆ ಮಾತ್ರ ಸೀಮಿತ ಮಾಡಿರುವುದರಿಂದ ತುಂಬಾ ತೊಂದರೆಯಾಗಿರುತ್ತದೆ. ಹಾಗಾಗಿ ನಗರ ವ್ಯಾಪ್ತಿಯಲ್ಲಿ 1996 ನಂತರ ಮಂಜೂರಾದ ಎನ್ ಸಿ ಆರ್ ದರ್ಕಾಸ್ ಕಡತಗಳನ್ನು 1 ರಿಂದ 5 ನಮೂನೆ ಮಾಡಿ ಪ್ಲಾಟಿಂಗ್ ಮಾಡಿಸಲು ಆದೇಶ ನೀಡುವಂತೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫಾ ಅವರು ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

whatsapp image 2025 06 03 at 10.29.44 pm

Sponsors

Related Articles

Back to top button