ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ: ಸಂತ್ರಸ್ತ ರೈತರ ಸಭೆ…

ಬಂಟ್ವಾಳ: ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಸಂತ್ರಸ್ತ ರೈತರ ಸಭೆ ಬಂಟ್ವಾಳ ಪ್ರವಾಸಿ ಬಂಗಲೆ ಆ.23 ರಂದು ನಡೆಯಿತು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಸಲಹೆಗಾರ ಮುರುವ ಮಹಾಬಲ ಭಟ್, ತಾಲೂಕು ರೈತರ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್, ರೈತ ಸಂಘದ ಮುಖಂಡರಾದ ರೂಪೇಶ್ ರೈ ಅಲಿಮಾರ್, ವಿನೋದ್ ಭಟ್ ಪಾದೆಕಲ್ಲು, ಇಬ್ರಾಹಿಂ ಖಲೀಲ್, ಚಂದ್ರಹಾಸ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ರಾಜೀವಗೌಡ, ಸಂತ್ರಸ್ತ ರೈತರಾದ ಶಾಮ್ ವಿಟ್ಲ, ಕೃಷ್ಣಪ್ರಸಾದ್ ತಂತ್ರಿ, ಅಶೋಕ್, ಜೆಸಿಂತಾ, ಮೊದಲಾದವರು ಉಪಸ್ಥಿತರಿದ್ದರು.
ಸಂತ್ರಸ್ತ ರೈತರ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ಮೂಲಕ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು.