ಪುತ್ತೂರು – ಚಿನ್ನಾಭರಣ ಅಂಗಡಿಗಳಿಂದ ಕಳವು…

ಪುತ್ತೂರು: ಇಲ್ಲಿನ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಸೇರಿದಂತೆ ಒಟ್ಟು ನಾಲ್ಕು ಚಿನ್ನಾಭರಣ ಅಂಗಡಿಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ ಘಟನೆ ಮಾ. 25 ರ ಬೆಳಿಗ್ಗೆ ವರದಿಯಾಗಿದೆ.

ಶ್ರೀಧರ ಭಟ್ ಜ್ಯುವೆಲ್ಲರ್ಸ್, ಕೋರ್ಟ್ ರಸ್ತೆಯ ಶ್ರೀ ನವಮಿ ಜ್ಯುವೆಲ್ಲರ್ಸ್, ತೃಪ್ತಿ ಜ್ಯುವೆಲ್ಲರ್ಸ್, ಹಿರಣ್ಯ ಜ್ಯುವೆಲ್ಲರ್ಸ್ ಅಂಗಡಿಗಳ ಬಾಗಿಲುಗಳನ್ನು ಮೆಷಿನ್‌ ಕಟ್ಟಿಂಗ್ ನ ಸಹಾಯದಿಂದ ಒಡೆದು ಒಳ ನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

 

Sponsors

Related Articles

Leave a Reply

Your email address will not be published. Required fields are marked *

Back to top button