ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಬಂಟ್ವಾಳ- ಹಳೆ ವಿದ್ಯಾರ್ಥಿಗಳ ಸಮಾವೇಶ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಬಂಟ್ವಾಳ ಇಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸೆ.12 ರಂದು ಜರಗಿತು.
ಕಾಲೇಜು ಪ್ರಾಚಾರ್ಯ ಬಾಬು ಗಾಂವ್ಕರ್ ಕಾಲೇಜು, ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ ಸುಬ್ರಹ್ಮಣ್ಯ ಭಟ್, ಬಿ ಮಹಾಬಲರೈ, ಸುರೇಶ್ ಶೆಟ್ಟಿ, ವಿಶ್ವನಾಥ ಕೊಟ್ಟಾರಿ, ಉಪನ್ಯಾಸಕರಾದ ವಿಷ್ಣು ಮೂರ್ತಿ ಮಯ್ಯ, ಸುರೇಶ್ ಐತಾಳ, ಭಾರತಿ, ಸುಂದರಿ, ಶೋಭಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿದ ಪೊಲೀಸ್ ಇಲಾಖೆಯ ಜಬ್ಬಾರ್ ಕೊಳಕೆ, ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಸಿದ ಪ್ರಾಚಾರ್ಯ ಬಾಬು ಗಾಂಕರ್ ಇವರುಗಳನ್ನು ಹಳೆವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಪುರಂದರ, ನಾಗೇಶ್, ಶಿವಪ್ರಸಾದ್ ಶೆಟ್ಟಿ, ನಾಗಪ್ಪ, ಪ್ರಮೀಳಾ, ರೋಷನ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು, ಹಳೆ ವಿದ್ಯಾರ್ಥಿ ಸ್ಮಿತಾ ಪೂಂಜಾ ಕಾಲೇಜಿಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು.

Related Articles

Back to top button