ನಮ್ಮ ನಡೆ ಶ್ರೀದೇವಿ ಬೆಟ್ಟದ ಕಡೆ – ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಕಲ್ಪ…

ಬಂಟ್ವಾಳ: ನಮ್ಮ ನಡೆ ಶ್ರೀದೇವಿ ಬೆಟ್ಟದ ಕಡೆ ಇಂದು ಪ್ರಾತಕಾಲ ಸಜೀಪನಡು ಸಜೀಪಪಡು ಗ್ರಾಮದ ಗಡಿ ಭಾಗದಲ್ಲಿರುವ ಬಿಲ್ಲಪ್ಪದವು ಎಂಬಲ್ಲಿರುವ ಅತಿ ಪುರಾತನ ದೇವಿ ಸಾನಿಧ್ಯದ ಜೀಣೋದ್ಧಾರದ ಅಂಗವಾಗಿ ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಕಲ್ಪ ಮಾಡಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಕೆ. ರಾಧಾಕೃಷ್ಣ ಆಳ್ವ, ಶಿವರಾಮ ಭಂಡಾರಿ, ಪ್ರವೀಣ್ ಆಳ್ವ, ಯಶವಂತ ದೇರಾಜೆ ಗುತ್ತು, ಸೋಮನಾಥ ಬಂಡಾರಿ, ಆನಂದ ರೈ, ಸುರೇಶ್ ಬಂಗೇರ, ಹರೀಶ್ ಬಂಗೇರ, ಪ್ರವೀಣ್ ಶೆಟ್ಟಿ, ಪ್ರವೀಣ್ ಬಂಡಾರಿ, ಪ್ರೀತಮ್, ದಿನೇಶ್, ರಾಮಕೃಷ್ಣ ಭಟ್, ಮೊದಲಾದವರು ಉಪಸ್ಥಿತರಿದ್ದರು.
ಮೂಲಭೂತ ಸೌಕರ್ಯ ರಸ್ತೆ ಸಂಪರ್ಕವನ್ನು ಕ್ಷೇತ್ರಕ್ಕೆ ಕಲ್ಪಿಸಲು ತೀರ್ಮಾನಿಸಲಾಯಿತು. ಕ್ಷೇತ್ರದಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲು ದಿನ ನಿಗದಿಗೊಳಿಸಲಾಯಿತು.

Related Articles

Back to top button