ಪಿಕಾರ್ಡ್ ಬ್ಯಾಂಕಿನ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸನ್ಮಾನ….

ಕರ್ನಾಟಕ ರಾಜ್ಯ ಬ್ಯಾಂಕಿನ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಕಸ್ಕಾರ್ಡ್ ಬ್ಯಾಂಕಿನ ರಾಜ್ಯಾಧ್ಯಕ್ಷರಾದ ಕೆ. ಷಡಕ್ಷರಿ ಹಾಗೂ ಜಿಲ್ಲಾ ನಿರ್ದೇಶಕರಾದ ಸುದರ್ಶನ್ ಜೈನ್ ಇವರುಗಳು ಪುತ್ತೂರು ಪಿಕಾರ್ಡ್ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಣಾಧಿಕಾರಿ ನಿವೃತ್ತರಾದ ಯಶೋಧರ ಜೈನ್ ಹಾಗೂ ಬೆಳ್ತಂಗಡಿ ಪಿಕಾರ್ಡ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾದ ವೆಂಕಪ್ಪಯ್ಯ ಇವರುಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ನಬಾರ್ಡ್ ಅಧಿಕಾರಿಗಳಾದ ಎಸ್. ರಮೇಶ್ ಹಾಗೂ ಪುತ್ತೂರು ಪಿಕಾರ್ಡ್ ಬ್ಯಾಂಕಿನ ಆಧ್ಯಕ್ಷರಾದ ಮನೋಹರ ರೈ, ಬೆಳ್ತಂಗಡಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾದ ಪ್ರವೀಣ್ ಚಂದ್ರ ಜೈನ್, ಕಾರ್ಕಳ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾದ ಅಶೋಕ ಕುಮಾರ್ ಬಲ್ಲಾಳ್ ಇವರುಗಳು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button