ಅರಕಲಗೂಡು-ಟಿ ಎಂ ಶಾಹಿದ್ ತೆಕ್ಕಿಲ್ ಅವರಿಂದ ಅ.ನ.ಕೃ ಪುತ್ಥಳಿಗೆ ಮಾಲಾರ್ಪಣೆ…

ಅರಕಲಗೂಡು: ಪಟ್ಟಣಕ್ಕೆ ಆಗಮಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ *ಟಿ ಎಂ ಶಾಹಿದ್ ತೆಕ್ಕಿಲ್ ರವರು “ಕನ್ನಡ ಕಾದಂಬರಿಯ ಸಾರ್ವಭೌಮ”ಎಂದು ಹೆಗ್ಗಳಿಕೆ ಪಡೆದಿರುವ ಅ.ನ.ಕೃ (ಅರಕಲಗೂಡು ನರಸಿಂಗರಾಯ ಕೃಷ್ಣರಾಯ) ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಪಿ ಶ್ರೀಧರ್ ಗೌಡ,ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಸನ್ನ ಕುಮಾರ್, ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ,ಅರಕಲಗೂಡು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಸುಭಾನ್ ಷರೀಫ್ ,ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ದಶರಥ, ಗ್ಯಾರಂಟಿ ಸಮಿತಿ ಸದಸ್ಯರಾದ ಸೋಮಶೇಖರ್ ಕಬ್ಬಳಿಗೆರೆ ಮತ್ತು ಸತ್ಯರಾಜ್ ಬರಗೂರು ,ಅರಕಲಗೂಡು ಪಟ್ಟಣದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮುಸಾವೀರ್ ಪಾಷಾ,ತಾಲ್ಲೂಕು ಇಂಟಕ್ ಅಧ್ಯಕ್ಷರಾದ ರಂಗನಾಥ, ಕೆಡಿಪಿ ಸದಸ್ಯರಾದ ಸುರೇಶ್ ಸೋಮನಹಳ್ಳಿ , ಕಾಂಗ್ರೆಸ್ ಮುಖಂಡರಾದ ನಿಂಗರಾಜು, ಅತ್ನಿ ಯೋಗೇಶ್ ,ಉಮೇಶ್ ಹಾಗೂ ಪ್ರವೀಣ್ ಹಂಪಾಪುರ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

whatsapp image 2024 10 01 at 8.07.32 pm

Sponsors

Related Articles

Back to top button