ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಏನೆಪೋಯ ಅಬ್ದುಲ್ಲ ಕುಂಞಿ ಅವರಿಂದ ಸನ್ಮಾನ…

ಮಂಗಳೂರು: ರಾಜ್ಯ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅ.1 ರಂದು ಮಂಗಳೂರಿನಲ್ಲಿ ಏನೆಪೋಯ ಕಲ್ಪಿತ ವಿಶ್ವವಿದ್ಯಾನಿಲಯದ ಕುಲಪತಿ ಏನೆಪೋಯ ಅಬ್ದುಲ್ಲ ಕುಂಞಿ ಅವರನ್ನು ಅವರ ಕಛೇರಿಯಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಏನೆಪೋಯ ಅಬ್ದುಲ್ಲ ಕುಂಞಿ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಸುಳ್ಯ ಸುಡ ಅಧ್ಯಕ್ಷರಾದ ಮುಸ್ತಾಫ ಕೆ ಎಂ, ಇಕ್ಬಾಲ್ ಸುಣ್ಣಮೂಲೆ ಮತ್ತಿತರರು ಉಪಸ್ಥಿತರಿದ್ದರು.