ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ – ನೂತನ ಕಟ್ಟಡಗಳಿಗೆ ಶಿಲಾನ್ಯಾಸ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ, ಬಂಟ್ವಾಳ ಇಲ್ಲಿಗೆ ಕೆಆರ್ ಐಡಿಎಲ್ ಯೋಜನೆಯಂತೆ ಮಂಜೂರಾದ ಅಂದಾಜು 55 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಎರಡು ನೂತನ ಕಟ್ಟಡಗಳಿಗೆ ಅಡಿಗಲ್ಲು ಇಡುವ ಶಿಲಾನ್ಯಾಸದ ಭೂಮಿಪೂಜೆಯನ್ನು ಎo ಸುಬ್ರಹ್ಮಣ್ಯ ಭಟ್ ವಿದ್ಯುಕ್ತವಾಗಿ ನೆರವೇರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಕಾಲೇಜು ಪ್ರಾಚಾರ್ಯ ಬಾಬು ಗಾವoಕರ್, ಕೆ ಆರ್ ಐ ಡಿ ಎಲ್ ಕಿರಿಯ ಅಭಿಯಂತರ ರಕ್ಷಿತ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ್ ಕೊಟ್ಟಾರಿ, ವೀರೇಂದ್ರ ಕುಲಾಲ್, ಮಹಾಬಲ ರೈ ಬಿ, ಸುರೇಶ್ ಶೆಟ್ಟಿ, ಉಪನ್ಯಾಸಕರಾದ ವಿಷ್ಣುಮೂರ್ತಿ ಮಯ್ಯ, ಗಣೇಶ ಐತಾಳ, ಪ್ರಶಾಂತ್, ಗಾಯತ್ರಿ, ಸುಂದರಿ, ಭಾರತಿ, ಲತಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಪಂಚಾಯತ್ ಸದಸ್ಯರಾದ ಪ್ರವೀಣ್ ಗಟ್ಟಿ, ಪ್ರಶಾಂತ, ಸೀತಾರಾಮ ಸಪಲ್ಯ, ಸುಂದರಿ, ವಿಜಯ, ಪ್ರಮುಖರಾದ ಸುರೇಶ್ ಸರ್ತಾವು, ಯಶವಂತ ನಾಯಕ, ಶಿವಪ್ರಸಾದ್ ಶೆಟ್ಟಿ, ರೊನಾಲ್ಡ, ಸಂಜೀವ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button