ನೆಲ್ಲೂರು ಕೆಮ್ರಾಜೆ ಕಾಂಗ್ರೆಸ್ ಗ್ರಾಮ ಸಮಿತಿ ಸಭೆ…

ಸುಳ್ಯ: ನೆಲ್ಲೂರು ಕೆಮ್ರಾಜೆ ಕಾಂಗ್ರೆಸ್ ಗ್ರಾಮ ಸಮಿತಿ ಸಭೆ ಸೆ. 26 ರಂದು ಲಕ್ಷ್ಮಣ ಬೊಳ್ಳಾಜೆ ಯವರ ಮನೆಯಲ್ಲಿ ನಡೆಯಿತು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ದಿನೇಶ್ ಅಂಬೆಕಲ್ಲು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮ ಉಸ್ತುವಾರಿ ಭವಾನಿಶಂಕರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಭಟ್ ಬೆಟ್ಟ, ನಾರ್ಣಕಜೆ ಬೂತ್ ಸಮಿತಿ ಅಧ್ಯಕ್ಷರಾದ ಸೋಮಶೇಖರ್ ನಾಯಕ್, ಬೊಳ್ಳಾಜೆ ಬೂತ್ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಬೊಳ್ಳಾಜೆ, ಹಿರಿಯರಾದ ರಾಮ ಮಣಿಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ದಿನೇಶ್ ಅಂಬೆಕಲ್ಲು ಪ್ರಜಾ ಪ್ರತಿನಿಧಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ನಂತರ ನೂತನ ಗ್ರಾಮ ಸಮಿತಿ ರಚಿಸಲಾಯಿತು. ನೂತನ ಗ್ರಾಮ ಸಮಿತಿ ಅಧ್ಯಕ್ಷರಾಗಿ ಮನೋಹರ್ ಬೊಳ್ಳಾಜೆ ಯವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ಹರ್ಲಡ್ಕ, ಉಪಾಧ್ಯಕ್ಷರುಗಳಾಗಿ ಸೋಮಶೇಖರ್ ಜಬಳೆ, ವೇಣುಗೋಪಾಲ್ ಪುನುಕುಟ್ಟಿ, ರವಿಪ್ರಸಾದ್ ಕೊರತ್ತೋಡಿ, ಜಯಪ್ರಕಾಶ್ ಚಾಕಟೆ ಮೂಲೆ, ಕಾರ್ಯದರ್ಶಿಗಳಾಗಿ ಜನಾರ್ದನ ನಾಯಕ್, ಅನ್ವಿತ್ ಕೇಪಳಕಜೆ, ಪ್ರಮೋದ್ ಬೊಳ್ಳಾಜೆ, ಜಾನಕಿ ಬೊಳ್ಳಾಜೆ, ಖಜಾಂಜಿ ಯಾಗಿ ಹರೀಶ್ ಕೊಡಪಾಲ, ಸದಸ್ಯರುಗಳಾಗಿ ರಾಜಾರಾಮ್ ಭಟ್ ಬೆಟ್ಟ,ಭಾಸ್ಕರ ಪುನುಕುಟ್ಟಿ, ಲಕ್ಷ್ಮಣ ಬೊಳ್ಳಾಜೆ, ಗಗನ್ ಮಂದ್ರಪ್ಪಾಡಿ, ರಾಮಚಂದ್ರ ಮನಿಯಾಣಿ, ಜಯರಾಮ ಬೊಳ್ಳಾಜೆ, ಕಿಶೋರ್ ಬೊಳ್ಳಾಜೆ, ರಾಜೀವಿ ಬೊಳ್ಳಾಜೆ, ವಸಂತ ರಾಮ ಚೆನ್ನಡ್ಕ, ಕುಸುಮಾಧರ ಬೊಳ್ಳಾಜೆ, ವಿನಯ ಕುದ್ಪಾಜೆ, ಸುಂದರ ಕುಲಾಲ್, ಇಬ್ರಾಹಿಂ ಜೀರ್ಮುಕ್ಕಿ, ಅಬ್ದುಲ್ಲ ಜಿ ಹೆಚ್, ಗಂಗಾಧರ ಕೊರತ್ತೋಡಿ, ಶ್ರೀಮತಿ ವನಿತಾ ಬೊಳ್ಳಾಜೆ, ರೋಹಿತ್ ಇಂದುಗುಂಡಿ, ಶಶಿವರ್ಮ ಕಾಡುತೋಟ, ಹರೀಶ್ ಕೊರತೋಡಿ, ಶ್ರೀಧರ ಉಳಿಯದ ಮಜಲು ಇವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹಿತ್ ಹರ್ಲಡ್ಕ ಸ್ವಾಗತಿಸಿ ರಾಜಾರಾಮ್ ಭಟ್ ಬೆಟ್ಟ ವಂದಿಸಿದರು.

Sponsors

Related Articles

Back to top button