ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದ 105 ವಯಸ್ಸಿನ ಮಿಜಾರುಗುತ್ತು ಆನಂದ ಆಳ್ವ…

ಮೂಡುಬಿದಿರೆ: ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪಂಚ ಮಹಾಯೋಜನೆಗಳಲ್ಲೊಂದಾದ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯನ್ನು ಇಲ್ಲಿನ ಮಿಜಾರುಗುತ್ತು ಆನಂದ ಆಳ್ವ ಸ್ವೀಕರಿಸಿದ್ದಾರೆ.
ತಮ್ಮ ಮೊಮ್ಮಗ, ಆಳ್ವಾಸ್ ಎಜ್ಯುಕೇಷನ್ ಫೌಂಡೇಶನ್ ನ ಟ್ರಸ್ಟೀ ವಿವೇಕ್ ಆಳ್ವ ಅವರ ಸಹಕಾರದೊಂದಿಗೆ ಆನಂದ ಆಳ್ವರು ಭಗವದ್ಗೀತೆಯನ್ನು ಬರೆದು ಶ್ರೀಪಾದರ ಪರ್ಯಾಯದ ಅವಧಿಯಲ್ಲಿ 2024 ರಿಂದ 2026 ರ ಒಳಗೆ ಶ್ರೀ ಉಡುಪಿ ಕೃಷ್ಣನಿಗೆ ಸಮರ್ಪಿಸಲಿದ್ದಾರೆ. ಇದೇ ಬರುವ ಆಗಸ್ಟ್ 15 ರಂದು ತನ್ನ 105 ನೇ ಜನ್ಮದಿನಾಚರಣೆಯನ್ನು ಸಂಭ್ರಮಿಸಲಿರುವ ಅವರೊಂದಿಗೆ ಫೌಂಡೇಶನ್ ನ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ , ಡಾ| ವಿನಯ್ ಆಳ್ವ ಅವರು ಕೂಡಾ ಯಜ್ಞ ದೀಕ್ಷಾ ಬದ್ಧರಾಗಿದ್ದಾರೆ. ಕೋಟಿಗೀತಾ ಲೇಖನ ಯಜ್ಞ ಸಮಿತಿಯ ಸಂಕರ್ಷಣ ಪ್ರಖಂಡದ ಪ್ರಚಾರಕ ಕೆ.ವಿ ರಮಣಾಚಾರ್ಯ ಅವರು ಸಂಕಲ್ಪ ಮಂತ್ರ ಪಠಿಸಿ ಲೇಖನ ಪುಸ್ತಕಗಳನ್ನು ನೀಡಿದರು.

IMG 20220805 WA0030 300x225

IMG 20220805 WA0029 225x300

Related Articles