ಸುಧೀರ್ ರೈ ಮೇನಾಲ ಅವರಿಗೆ ಶ್ರದ್ಧಾಂಜಲಿ ಸಭೆ…

ಸುಧೀರ್ ರೈ ಯವರ ನೆನಪು ಶಾಶ್ವತವಾಗಿ ಉಳಿಸುವುದು ಅಗತ್ಯ - ಟಿ.ಎಂ ಶಹೀದ್ ತೆಕ್ಕಿಲ್…

ಸುಳ್ಯ: ಅಜ್ಜಾವರ ಮೇನಾಲದಲ್ಲಿ ಅಗಲಿದ ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯರಾದ ಸುಧೀರ್ ರೈ ಮೇನಾಲ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಅಜ್ಜಾವರ ಶ್ರೀಕ್ರಷ್ಣ ಭಜನಾ ಮಂದಿರದಲ್ಲಿ ಜ. 4 ರಂದು ನಡೆಯಿತು.
ಸಭೆಯಲ್ಲಿ ಮೇನಾಲ ಕಾಳಿಕಾಂಬಾ ದುರ್ಗಾ ಕ್ಷೇತ್ರದ ಧರ್ಮದರ್ಶಿ ಪದ್ಮಾನಾಭ ಸ್ವಾಮಿಯವರು ಸುದೀರ್ ರೈ ಮೇನಾಲರವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿದರು.
ಈ ಸಂಧರ್ಭದಲ್ಲಿ ನುಡಿನಮನ ಸಲ್ಲಿಸಿದ ಕಾಂಗ್ರೇಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿಯ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಸುಧೀರ್ ರೈವರು ಜಾತಿ, ಧರ್ಮ ಪಕ್ಷ ಬೇದ ನೋಡದೆ ಎಲ್ಲರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುತ್ತಿದ್ದರು. ಅವರ ಆಕಸ್ಮ್ಮಿಕ ಮರಣವು ಎಲ್ಲರಿಗೂ ತುಂಬಲಾರದ ನಷ್ಟ, ಅವರ ಮಕ್ಕಳು ವಿಧ್ಯಾಭಾಸವನ್ನು ಪಡೆದು ಉನ್ನತ ಸ್ಥಾನದಲ್ಲಿರಬೇಕು ಮತ್ತು ಅವರನ್ನು ಶಾಶ್ವತವಾಗಿ ನೆನಪಿಸುವ ಕಾರ್ಯಕ್ರಮವನ್ನು ಮಾಡಿದರೆ ಮಾತ್ರ ಅವರಿಗೆ ನಾವು ನೀಡುವ ನಿಜವಾದ ಶ್ರದ್ಧಾಂಜಲಿ ಎಂದರು.
ಸಭೆಯಲ್ಲಿ ಮೇನಾಲ ಕುಟುಂಬದ ಹಿರಿಯರಾದ ಗುಡ್ಡಪ್ಪ ರೈ ಮೇನಾಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಕಸಾಪ ಜಿಲ್ಲಾ ನಿರ್ದೇಶಕ ರಾಮ ಪಲ್ಲತಡ್ಕ, ಸುಳ್ಯ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಶೀನಪ್ಪ ಬಯುಂಬು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನವೀನ್ ರೈ ಮೇನಾಲ, ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಪಿ.ಎಸ್ ಗಂಗಾಧರ್, ಗೋಕುಲ್ ದಾಸ್ ಅಜ್ಜಾವರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ್, ಸುದೀರ್ ರೈ ರವರ ಸಹೋದರಿ ಸುಚಿತಾ ರೈ ಮೊದಲಾದವರು ಉಪಸ್ಥಿತರಿದ್ದರು.
ಸುಬೋದ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಲಕೃಷ್ಣ ಮೇನಾಲ ಕಾರ್ಯಕ್ರಮ ನಿರೂಪಿಸಿದರು.

img 20230105 wa0017
Sponsors

Related Articles

Back to top button