ಆಮಂತ್ರಣ ಪತ್ರ ಬಿಡುಗಡೆ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಳ ಸಜೀಪಮೂಡ ಇಲ್ಲಿನ ಶ್ರೀ ಮಹಾಶಿವರಾತ್ರಿ ಪೂಜಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರವನ್ನು ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳು ಫೆ. 1 ರಂದು ಶ್ರೀ ಕ್ಷೇತ್ರ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ, ಜಯಶಂಕರ ಬಾಸ್ರಿತ್ತಾಯ, ಮುಳ್ಳಂಜ ವೆಂಕಟೇಶ್ವರ ಭಟ್, ದೇವಿಪ್ರಸಾದ್ ಪೂಂಜ, ಪ್ರಮುಖರಾದ ವೇದಮೂರ್ತಿ ಮಹೇಶ್ ಭಟ್. ಸಂತೋಷ ಕುಮಾರ ಜಿ ಶೆಟ್ಟಿ, ಶ್ವೇತ ಎಸ್ ಶೆಟ್ಟಿ, ರವೀಂದ್ರನಾಥ ಭಂಡಾರಿ ಪುಣ್ಕೆ ಮಜಲು, ಎಸ್ ಶ್ರೀಕಾಂತ್ ಶೆಟ್ಟಿ, ರಾಮ್ ಪ್ರಸಾದ್ ಪೂಂಜ, ಕೆ ಸಂಜೀವ ಪೂಜಾರಿ, ಯಶವಂತ ದೇರಾಜಗುತ್ತು, ಜಯಪ್ರಕಾಶ್, ಬಾಲಕೃಷ್ಣ, ರಾಕೇಶ್ ಶೆಟ್ಟಿ, ಸುರೇಶ್ ಬಂಗೇರ, ವಸಂತ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button