ಮೂಡುಬಿದಿರೆ ಹಳೆ ಪೊಲೀಸ್ ಠಾಣಿಯ ಬಳಿ ರಸ್ತೆ ಅಭಿವೃದ್ಧಿ, ಹೈಮಾಸ್ಟ್ ದೀಪ ಉದ್ಘಾಟನೆ…

ಮೂಡುಬಿದಿರೆ: ವಾರ್ಡ್ ಸಂಖ್ಯೆ12 ನೇ ಹಳೆ ಪೊಲೀಸ್ ಠಾಣಿಯ ಬಳಿ ರೂ 9.50 ಲಕ್ಷ ಪುರಸಭಾ ನಿಧಿಯಿಂದ ಮಾಡಿರುವ ಅಭಿವೃದ್ದಿ ಕಾಮಗಾರಿಗಳಾದ ರಸ್ತೆ ಅಗಲೀಕರಣ,ಚರಂಡಿ ವ್ಯವಸ್ಥೆ, ಹಾಗೂ ನೂತನ ಹೈ ಮಾಸ್ಟ್ ದೀಪದ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತಾ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ಶ್ರೀಮತಿ ಸ್ವಾತಿ ಪ್ರಭು, ಶ್ರೀಮತಿ ಶ್ವೇತಾ ಪ್ರವೀಣ್, ಶ್ರೀಮತಿ ಧನಲಕ್ಷ್ಮಿಮಾರೂರ್, ಎಂ ಸಿ ಎಸ್ ಬ್ಯಾಂಕಿನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಭಟ್, ಪ್ರಮುಖರಾದ ದಯಾನಂದ ಪೈ, ಲಕ್ಷ್ಮಣ್ ಪೂಜಾರಿ, ರಾಜೇಶ್ ಮಲ್ಯ, ಸಾತ್ವಿಕ್ ಮಲ್ಯ, ರಾಹುಲ್ ಕುಲಾಲ್, ಅಭಿಷೇಕ್ ಕುಂದರ್, ಅಣ್ಣಪ್ಪ ಹಾಗೂ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

Sponsors

Related Articles

Back to top button