ಟಿ. ಎಂ. ಶಹೀದ್ ತೆಕ್ಕಿಲ್ ರವರ ಸನ್ಮಾನ ಸಮಾರಂಭ – ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಹ್ವಾನ…
![whatsapp image 2024 07 04 at 2.17.23 pm](wp-content/uploads/2024/07/whatsapp-image-2024-07-04-at-2.17.23-pm-780x470.jpeg)
ಮಂಗಳೂರು : ಇಂದು ದ. ಕ. ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಯತೀಶ್ ಐಪಿಎಸ್ ರವರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಯವರು ಮಂಗಳೂರಿನಲ್ಲಿ ಭೇಟಿಯಾಗಿ ಟಿ. ಎಂ. ಶಹೀದ್ ತೆಕ್ಕಿಲ್ ರವರ ಸನ್ಮಾನ ಸಮಾರಂಭದ ಆಹ್ವಾನ ಪತ್ರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿ ಸದಸ್ಯರುಗಳಾದ ಪರಶುರಾಮ ಚಿಲ್ತಡ್ಕ, ಇಕ್ಬಾಲ್ ಏಲಿಮಲೆ, ಕೆ. ಎಂ.ಮುಸ್ತಫ, ರಂಜಿತ್ ರೈ, ರಾಧಾಕೃಷ್ಣ ಬೊಳ್ಳೂರು ಮೊದಲಾವರು ಉಪಸ್ಥಿತರಿದ್ದರು.