ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಾರಾಜೆ-ಶ್ರೀ ಕೃಷ್ಣ ಜನ್ಮಾಷ್ಟಮಿ…

ಬಂಟ್ವಾಳ: ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಾರಾಜೆ ಸಜೀಪ ಮೂಡ ಬಂಟ್ವಾಳ ತಾಲೂಕು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 36ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು
ಈ ಸಂದರ್ಭ ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಸಜೀಪ ಮಾಗಣೆ ತಂತ್ರಿಗಳಾದ ಎಂ ಸುಬ್ರಹ್ಮಣ್ಯ ಭಟ್, ಬಂಟ್ವಾಳ ಬಿಜೆಪಿ ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಜೆ ಎಸ್ ಪೇಂಟಿಂಗ್ ಗ್ರೂಪ್ ನ ಜಗದೀಶ್ ಬಜ್ಜಾರ್, ರಮೇಶ್ ರಾವ್ ಭಂಡಾರಿಬೆಟ್ಟು ಮಂದಿರದ ಅಧ್ಯಕ್ಷರಾದ ರಾಜೇಶ್ ಕೇಪುಲಗುಡ್ಡೆ ಮಹಿಳಾ ಮಂಡಲ ಅಧ್ಯಕ್ಷರಾದ ಶಿಲ್ಪಾ ಕಾರಾಜೆ ಉಪಸ್ಥಿತರಿದ್ದರು.
ಮಂದಿರದ ಪ್ರಧಾನ ಕಾರ್ಯದರ್ಶಿ ಜಗದೀಶ್ ಸ್ವಾಗತಿಸಿ, ಪುರುಷೋತ್ತಮ್ ವಂದನಾರ್ಪಣೆ ಮಾಡಿದರು. ಮನೋಹರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭ ಮಂದಿರದ ಹಿರಿಯ ಸದಸ್ಯರಾದ ಹರೀಶ್ ನಾಯಕ್, ಉಪಾಧ್ಯಕ್ಷರಾದ ನವೀನ್ ಪೂಜಾರಿ ಕಾರಾಜೆ ಮಧುಸೂದನ್ ಗಟ್ಟಿ ಮು೦ತಾದವರು ಉಪಸ್ಥಿತರಿದ್ದರು.

Sponsors

Related Articles

Back to top button