ಇಂಟಕ್ – ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷರಾಗಿ ಶ್ರೀ ಮುರುಗನ್ ಪಿ ನೇಮಕ…

ಸುಳ್ಯ: ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್) ಇದರ ಬೆಂಗಳೂರು ಕೇಂದ್ರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಶ್ರೀ ಮುರುಗನ್ ಪಿ ಅಡ್ಯಡ್ಕ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಮುರುಗನ್ ಅವರು ತೊಡಿಕಾನ ಗ್ರಾಮದ ಅಡ್ಯಡ್ಕದವರಾಗಿದ್ದಾರೆ.
ಅವರು ಶ್ರೀ ರಾಮಲಿಂಗಾ ರೆಡ್ಡಿ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ, ಶ್ರೀ ಕೆ.ವಿ.ಗೌತಮ್ ಡಿಸಿಸಿ ಅಧ್ಯಕ್ಷರು, ಬೆಂಗಳೂರು ಸೆಂಟ್ರಲ್, ಶ್ರೀ ಡಿ ಲಕ್ಷ್ಮಿ ವೆಂಕಟೇಶ್ ರಾಜ್ಯಾಧ್ಯಕ್ಷರಾದ ಐಎನ್‌ಟಿಯುಸಿ, ಕೆಪಿಸಿಸಿ ಬೆಂಗಳೂರು, ಶ್ರೀ ಎಂ ವಿನಾಯಕ, ಬ್ಲಾಕ್ ಅಧ್ಯಕ್ಷರು, ಚಾಮರಾಜಪೇಟೆ ಉಪಸ್ಥಿತಿಯಲ್ಲಿ ಆದೇಶ ಪತ್ರವನ್ನು ಸ್ವೀಕರಿಸಿದರು. ಕೆಪಿಸಿಸಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

whatsapp image 2024 08 27 at 7.56.08 pm

Sponsors

Related Articles

Back to top button