ಜೂನ್ 15: ಸುಳ್ಯ ರಂಗಮನೆಯಲ್ಲಿಹಿಮಾಲಯದ ಧ್ಯಾನಯೋಗ ಅರಿಯುವ ಸಮರ್ಪಣಾ ಧ್ಯಾನ…
ಸುಳ್ಯ: ಸದ್ಗುರು ಶ್ರೀ ಶಿವಕೃಪಾನಂದ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿರುವ ಸಮರ್ಪಣಾ ಧ್ಯಾನವು ಅತ್ಯಂತ ಸರಳ ಹಾಗೂ ಸಂಪೂರ್ಣ ಧ್ಯಾನ ಪದ್ಧತಿ ಆಗಿದೆ. ಇದರಲ್ಲಿ ಶಾರೀರಿಕ ಸ್ತರದಲ್ಲಿ ಯಾವುದೇ ಕ್ರಿಯೆಗಳಿಲ್ಲ. ಆಹಾರದ ನಿರ್ಬಂಧವಿಲ್ಲ. ಇದು ಕೇವಲ ಚೈತನ್ಯದ ಅನುಭೂತಿಗೆ ಪ್ರಾಮುಖ್ಯತೆ ನೀಡುತ್ತದೆ. ಶಿಬಿರದಲ್ಲಿ ಚೈತನ್ಯದ ಮೂಲಕ ಚಕ್ರ ಹಾಗೂ ನಾಡಿಗಳ ಶುದ್ಧೀಕರಣಗೊಂಡು ಧ್ಯಾನದ ಸ್ಥಿತಿಗೆ ಅನುಕೂಲವಾಗುತ್ತದೆ. ನಿಯಮಿತವಾದ ಧ್ಯಾನ ಸಾಧನೆಯಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸ್ತರಗಳಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದು. ಮನಸ್ಸು ಪ್ರಶಾಂತವಾಗುತ್ತಾ ಹೋಗಿ ಅಂತರ್ಮುಖಿ ಯಾತ್ರೆಯಿಂದ ನಮ್ಮನ್ನು ನಾವೇ ಅರಿಯುವ, ನಮಗೆ ನಾವೇ ಗುರುವಾಗುವ ವಿಶೇಷ ಧ್ಯಾನವೇ ಈ ಸಮರ್ಪಣಾ ಧ್ಯಾನ!!
* ಯಾವುದೇ ಜಟಿಲ ವಿಧಾನ ಅಥವಾ ವ್ಯಾಯಾಮ ಇರುವುದಿಲ್ಲ.
* ಯುವಕ-ಯುವತಿಯರು, ಹೆತ್ತವರು, ಪೋಷಕರು ಸೇರಿದಂತೆ 9 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
* ಯಾವುದೇ ಶುಲ್ಕವಿಲ್ಲ.
ದಿನಾಂಕ: 15-06-2025
ಸಮಯ: ಪೂರ್ವಾಹ್ನ 10.30 ರಿಂದ ಅಪರಾಹ್ನ 1.00
ಸ್ಥಳ: ರಂಗಮನೆ , ಹಳೆಗೇಟು, ಸುಳ್ಯ ದ.ಕ.
ಮಾಹಿತಿಗಾಗಿ: 9019680361
9731761700
9741489826