ಕೆಸಿಎಫ್ ಒಮಾನ್ ಹುಬ್ಬುರ್ರಸೂಲ್ ಮೀಲಾದ್ ಕಾನ್ಫರೆನ್ಸ್ ಪೋಸ್ಟರ್ ಬಿಡುಗಡೆ…

ಮಸ್ಕತ್ : ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1499 ನೇ ಜನ್ಮ ದಿನಾಚರಣೆಯ ಭಾಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಅಯೋಜಿಸಲ್ಪಡುವ ಬೃಹತ್ ಮೀಲಾದ್ ಸಮಾವೇಶ ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ವು ಮಾಝಿನ್ ಇಬ್ನು ಗುಲೂಬ (ರ.ಅ)ರವರ ಸನ್ನಿಧಿಯಲ್ಲಿ ನಡೆಯಿತು.
ಆ. 29 ರಂದು KCF ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಯ್ಯೂಬ್ ಕೋಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

“ಮುತ್ತು ನಬಿ ﷺ ಮಾನವೀಯತೆಯ ಮಾರ್ಗದರ್ಶಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟಂಬರ್ 27 ರಂದು ಅಲ್ ಫಾಮ್ ಬಾಲ್ ರೂಮ್,ಝಾಖರ್ ಮಾಲ್ ,ಅಲ್ ಖುವೈರ್ ನಲ್ಲಿ ವಿಜೃಂಭಣೆಯಿಂದ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅಬ್ದುಲ್ ಹಮೀದ್ ಈಶ್ವರಮಂಗಳ (ಪ್ರದಾನ ಕಾರ್ಯದರ್ಶಿ KCF ಅಂತರಾಷ್ಟ್ರೀಯ ಸಮಿತಿ) ಮುಖ್ಯ ಅತಿಥಿಯಾಗಿ ಮೌಲಾನ NKM ಶಾಫಿ ಸಅದಿ ಬೆಂಗಳೂರು ಹುಬ್ಬುರ್ರಸೂಲ್ (ಸ.ಅ) ಪ್ರಭಾಷಣ ಹಾಗೂ ಮದೀನಾದ ಮದ್ಹ್ ಗೀತೆಗಳ ಮೂಲಕ ಗುರಿತಿಸಿಕೊಂಡಿರುವ ಮುಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ರವರು ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ.
ಹಾಗೂ ಇನ್ನಿತರ ಪ್ರಗಲ್ಭ ಸಯ್ಯಿದರು, ಉಲಮಾ, ಉಮಾರಾ ನೇತಾರರು ಭಾಗವಹಿಸಲಿದ್ದಾರೆ.

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ಮುಶಾವರ ಸದಸ್ಯರಾದ GM ಮುಹಮ್ಮದ್‌ ಕಾಮಿಲ್ ಸಖಾಪಿ ಉಸ್ತಾದ್,ಮೀಲಾದ್ ಸ್ವಾಗತ ಸಮಿತಿಯ ಚೇರ್ಮೇನ್ ಸಯ್ಯಿದ್ ಆಬಿದ್ ಅಲ್ ಐದರೂಸಿ ತಂಙಳ್ , ಕನ್ವೀನರ್ ಅಬ್ಬಾಸ್ ಮರಕ್ಕಡ, ಫೈನಾನ್ಸ್ ಕಂಟ್ರೋಲರ್ ಹಾಜಿ ಇಕ್ಬಾಲ್ ಬರಕ, ಅಂತರಾಷ್ಟ್ರೀಯ ಸಮಿತಿಯ ನಾಯಕರಾದ ಜನಾಬ್ ಹಂಝ ಹಾಜಿ ಕನ್ನಂಗಾರ್, ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಆರಿಫ್ ಕೋಡಿ,ಕಾರ್ಯಕಾರಿ ಸಮಿತಿ ಸದಸ್ಯರಾದ ಶಮೀರ್ ಉಸ್ತಾದ್ ಹೂಡೆ, ಸಫ್ವಾನ್, ಲತೀಫ್ ತೋಡಾರ್ ರವರು ಉಪಸ್ಥಿತರಿದ್ದರು.

KCF ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಸಿದ್ದೀಖ್ ಮಾಂಬ್ಲಿ ವಂದಿಸಿದರು.

whatsapp image 2024 09 15 at 10.37.09 pm

Sponsors

Related Articles

Back to top button