ಪರಿಶುದ್ದ ಮನಸ್ಸಿನಿಂದ ಪ್ರಾರ್ಥಿಸಿದಾಗ ಭಗವಂತನ ಸಾಕ್ಷತ್ಕಾರ-ಬಿ.ರಮಾನಾಥ ರೈ…

ಬಂಟ್ವಾಳ: ಪರಿಶುದ್ದ ಮನಸ್ಸಿನಿಂದ ಪ್ರಾರ್ಥಿಸಿದಾಗ ಭಗವಂತನ ಸಾಕ್ಷತ್ಕಾರವಾಗುವುದು, ಮನಸ್ಸು ಶುದ್ಧೀಕರಣದಿಂದ್ದಾಗ ಉತ್ತಮ ಸಮಾಜವು ನಿರ್ಮಾಣವಾಗುವುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ನವೀಕರಣ, ಬ್ರಹ್ಮಕಲಶೋತ್ಸವ ಹಾಗೂ ನೂತನ ರಥ ಸಮರ್ಪಣೆಯ ಪ್ರಯುಕ್ತ ಮೇ.28 ರಂದು ರಾತ್ರಿ ನಡೆದ ಮೊದಲ ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯರ ಮಧ್ಯೆ ಪ್ರೀತಿ,ವಿಶ್ವಾಸ,ನಂಬಿಕೆ ಮುಖ್ಯವಾಗಿದೆ ಎಂದರು.
ದೇವಳದ ಬ್ರಹ್ಮಕಲಶೋತ್ಸವ ಸಮಿತಿ‌ ಅಧ್ಯಕ್ಷ ರಾಕೇಶ್ ಮಲ್ಲಿ ಸಭಾಧ್ಯಕ್ಷತೆ ವಹಿಸಿದ್ದರು.
ನಾವೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು,ಬ್ರಹ್ಮಕಲಶೋತ್ಸವ ಸಮಿತಿ‌ ಗೌರವಾಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್, ಉದ್ಯಮಿ ವಾಸುದೇವಭಟ್ ಕುಂಜಿತ್ತೂಡಿ, ನಾವೂರು ಪ್ರಾ.ಆ.ಕೇಂದ್ರದ ವೈದ್ಯರಾದ ಡಾ.ಜೀವನ್ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಗುತ್ತಿಗೆದಾರ ಸೀತಾರಾಮ್ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಪ್ರಧಾನಾರ್ಚಕರಾದ ವೇ.ಮೂ.ಸುದರ್ಶನ್ ಬಲ್ಲಾಳ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸದಾನಂದ ಗೌಡ ನಾವೂರು ವಂದಿಸಿದರು. ರಾಜೇಶ್ ಕೊಟ್ಟಾರಿ, ಹರ್ಷರಾಜ್ ಕಾರ್ಯಕ್ರಮ ನಿರೂಪಿಸಿದರು.
ದೇವರ ಪ್ರತಿಷ್ಠೆ:
ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಶ್ರೀ ಅಂಜನೇಯ ಹಾಗೂ ಶ್ರೀಸೋಮನಾಥೇಶ್ವರ ದೇವರ ಪ್ರತಿಷ್ಠೆ,ಶ್ರೀಗೋಪಾಲಕೃಷ್ಣ ದೇವರಿಗೆ ತತ್ಪಹೋಮ, ತತ್ಪಕಲಶಾಭಿಷೇಕ, ಬ್ರಹ್ಮಕಲಶ, ಬ್ರಹ್ಮರಥ ಸಮರ್ಪಣೆಯ ವೈಧಿಕ ವಿಧಿವಿಧಾನಗಳು ಎಡಪದವು ನಾರಾಯಣ ತಂತ್ರಿಗಳ ನೇತೃತ್ವ, ದೇವಳದ ಪ್ರಧಾನ ಅರ್ಚಕರಾದ ವೇ.ಮೂ.ಸುದರ್ಶನ್ ಬಲ್ಲಾಳ್ ಪೌರೋಹಿತ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ‌ ಗೌರವಾಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಅಧ್ಯಕ್ಷ ರಾಕೇಶ್ ಮಲ್ಲಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಸಜೀಪ ಮಾಗಣೆ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಸಂಪತ್ ಕುಮಾರ್ ಶೆಟ್ಟಿ, ಸೀತಾರಾಮ ಸಾಲಿಯಾನ್ ಬೀದಿ,ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಯೋಜನಾಧಿಕಾರಿ ಜಯಾನಂದ ಪಿ.,ಲೋಕನಾಥ ಶೆಟ್ಟಿ ಪಿ.ಸದಾನಂದ ಹಳೇಗೇಟು ಮೊದಲಾದವರಿದ್ದರು.

whatsapp image 2025 05 29 at 4.39.49 pm

Sponsors

Related Articles

Back to top button