ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ಹನ್ನೆರಡನೇ ಸಂಪರ್ಕ ಸಭೆ…

ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ಹನ್ನೆರಡನೇ ಸಂಪರ್ಕ ಸಭೆ ಜೂ.14 ರಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಮಂಜಿನಡ್ಕ ಮನೆಯಲ್ಲಿ ಅಂಗ ಸಂಸ್ಥೆ ಅಧ್ಯಕ್ಷ ಕೆ ರಮೇಶ್ ಹೊಳ್ಳ ಅಧ್ಯಕ್ಷತೆಯಲ್ಲಿ ಜರಗಿತು.
ಉಪಾಧ್ಯಕ್ಷರಾದ ಗಣಪತಿ ಸೋಮಯಾಜಿ ಹಾಗೂ ಪ್ರದೀಪ್ ಹೊಳ್ಳ , ಕಾರ್ಯದರ್ಶಿ ರಾಮಕೃಷ್ಣರಾವ್, ವಕೀಲರಾದ ನಾರಾಯಣ ಸೋಮಯಾಜಿ, ಕೂಟ ಬಂದು ಟ್ರಸ್ಟ್ ಅರ್ಬಿ ನಾರಾಯಣ ಸೋಮಯಾಜಿ, ಪಾಣೆ ಮಂಗಳೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಸಂಚಾಲಕ ಪ್ರಶಾಂತ ಹೊಳ್ಳ, ಉಪನ್ಯಾಸಕ ಬಾಲಕೃಷ್ಣ ಮೈಯ್ಯ, ಸೋಮಶೇಖರ ಮಯ್ಯ, ವೇದಾನಂದ ಕಾರಂತ, ಧನೇಶ್ವರ ರಾವ್, ಮಹಿಳಾ ವೇದಿಕೆ ಅಧ್ಯಕ್ಷೆ ಉಷಾ ಪ್ರಭಾಕರ್, ಕೇಂದ್ರ ಸಮಿತಿ ಪ್ರಮುಖರಾದ ಭಾರತೀ ಶ್ರೀಧರ್, ರವಿಶಂಕರ ಮಯ್ಯ, ಬಿಲಿಯನ್ ಫೌಂಡೇಶನ್ ಕಾರ್ಯದರ್ಶಿ ನರೇಶ್ ಹೊಳ್ಳ, ರಾಮಚಂದ್ರ ಮೈಯ್ಯ ಉಪಸ್ಥಿತರಿದ್ದರು. ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಗೆ ಸ್ವಂತ ನಿವೇಶನ ಹಾಗೂ ಸಮುದಾಯ ಭವನ ನಿರ್ಮಿಸಲು ತೀರ್ಮಾನಿಸಲಾಯಿತು.