ದಾವಣಗೆರೆ ದಕ್ಷಿಣ ಉಪ ಚುನಾವಣೆ – ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮತದಾರರನ್ನ ಭೇಟಿಯಾದ ಟಿ ಎಂ ಶಾಹಿದ್ ತೆಕ್ಕಿಲ್…
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಪಿಸಿಸಿ ವೀಕ್ಷಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಮತದಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಾರ್ವಜನಿಕ ಸಭೆ ಸ್ಥಳದಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಮತ ಹಾಕುವಂತೆ ವಿನಂತಿಸಿದರು .
ಈ ಸಂದರ್ಭದಲ್ಲಿ ಸಚಿವರಾದ ಮಲ್ಲಿಕಾರ್ಜುನ್,ಸುಧಾಕರ್ ,ಮಂಕಾಳು ವೈದ್ಯ, ರಹೀಂ ಖಾನ್ ,ಸಲೀಂ ಅಹಮದ್, ಸಂಸತ್ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೈನ್ ಎಂ ಪಿ ,ಸ್ಥಳೀಯ ಮಾಜಿ ಕಾರ್ಪೋರೇಟರ್ ಚಂದ್ರು ಮಾಜಿ ಮೇಯರ್ ವಿನಾಯಕ ಸ್ಥಳೀಯ ಮುಖಂಡರಾದ ಶಿವಾಜಿ ,ಸಿದ್ದಪ್ಪ, ಸುದರ್ಶನ್ ,ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಸಭೆ ನಂತರ ನಗರದಲ್ಲಿ ಮತಯಾಚಿಸಿದರು.








