ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು- ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಕ್ಕೆ ನೂತನ ಸಂಯೋಜಕರು…

ಪುತ್ತೂರು : ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗವನ್ನು ಭೌತಶಾಸ್ತ್ರ ವಿಭಾಗ ಮತ್ತು ರಸಾಯನ ಶಾಸ್ತ್ರ ವಿಭಾಗವೆಂದು ವಿಭಜಿಸಲಾಗಿದ್ದು ಇಬ್ಬರು ಸಂಯೋಜಕರನ್ನು ನೇಮಿಸಲಾಗಿದೆ.
ಭೌತಶಾಸ್ತ್ರ ವಿಭಾಗಕ್ಕೆ 25 ವರ್ಷಗಳ ಭೋದನಾ ಅನುಭವವಿರುವ 22 ವರ್ಷಗಳಿಂದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಪ್ರೊ .ತೇಜಸ್ವಿನಿ.ಎಲ್.ಪಿ ಇವರು ಸಂಯೋಜಕಿಯಾಗಿರುತ್ತಾರೆ. ಒಟ್ಟು 18 ವರ್ಷಗಳ ಅಧ್ಯಾಪನದ ಅನುಭವವನ್ನು ಹೊಂದಿರುವ ಮತ್ತು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ 15 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ.ಶ್ವೇತಾಂಬಿಕಾ.ಪಿ ಅವರನ್ನು ರಸಾಯನ ಶಾಸ್ತ್ರ ವಿಭಾಗಕ್ಕೆ ಸಂಯೋಜಕಿಯನ್ನಾಗಿ ನೇಮಿಸಲಾಗಿದೆ.
ಆಡಳಿತಾತ್ಮಕ ದೃಷ್ಟಿಯಿಂದ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.

Related Articles