ಅಮೃತ ಸಾಹಿತ್ಯ ವೇದಿಕೆಯ ಲಾಂಛನ ಬಿಡುಗಡೆ….

ಬಂಟ್ವಾಳ:ಅಮೃತ ಪ್ರಕಾಶ ಪತ್ರಿಕೆಯ ಸಾರಥ್ಯದಲ್ಲಿ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ಅಮೃತ ಸಾಹಿತ್ಯ ವೇದಿಕೆಯನ್ನು ರೂಪಿಸಲಾಗಿದ್ದು , ವೇದಿಕೆ ಯ ಲಾಂಛನವನ್ನು ಬಿ.ಸಿ.ರೋಡಿನಲ್ಲಿ ಬಿ.ಆರ್.ಸಿ.ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಲಾಂಛನ ಬಿಡುಗಡೆ ಗೊಳಿಸಿದರು. ಫರಂಗಿ ಪೇಟೆಯ ತೃಪ್ತಿ ಕನ್ಸ್ಟ್ರಕ್ಷನ್ ಮಾಲಕರಾದ ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಗಳಾಗಿದ್ದರು.ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ಗಂಗಾಧರ ಆಳ್ವ ಅಧ್ಯಕ್ಷತೆ ವಹಿಸಿದ್ದರು.ಅಮೃತ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಡಾ.ಮಾಲತಿ ಶೆಟ್ಟಿ ಮಾಣೂರು, ಉಪಸಂಪಾದಕ ಡಾ.ಕಾಸರಗೋಡು ಅಶೋಕ್ ಕುಮಾರ್ ಹಾಗೂ ಶಿಕ್ಷಕಿ, ಸಾಹಿತಿ ಸುರೇಖಾ ಯಳವಾರ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button