ಉಚ್ಚಿಲದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಲಾರಿ ಢಿಕ್ಕಿ – ಚಾಲಕ ಸಾವು….

ಪಡುಬಿದ್ರಿ: ಉಚ್ಚಿಲದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಲಾರಿಯೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಸುಮಾರು 4 ಗಂಟೆಗೆ ನಡೆದಿದೆ.
ಉಡುಪಿ- ಮಂಗಳೂರು ರಸ್ತೆಬದಿ ಕೆಟ್ಟು ನಿಂತಿದ್ದ ಮೈದಾಹಿಟ್ಟು ಸಾಗಾಟದ ಲಾರಿಗೆ ಹಿಂದಿನಿಂದ ಬಂದ ಈರುಳ್ಳಿ ಸಾಗಾಟದ ಇನ್ನೊಂದು ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ವೇಳೆ ಕೆಟ್ಟು ನಿಂತ ಲಾರಿಯನ್ನು ರಿಪೇರಿ ಮಾಡಲು ಪರಿಶೀಲಿಸುತ್ತಿದ್ದ ಅದರ ಚಾಲಕ ಹುಬ್ಬಳ್ಳಿಯ ಮಹಂತೇಶ್ ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಇನ್ನೊಂದು ಲಾರಿಯ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ. ಅಪಘಾತದ ತೀವ್ರತೆಗೆ ಎರಡು ಲಾರಿಗಳು ಪಲ್ಟಿಯಾಗಿದ್ದು ಕೆಟ್ಟುನಿಂತ ಲಾರಿ ಡಿವೈಡರ್ ದಾಟಿ ಇನ್ನೊಂದು ಇನ್ನೊಂದು ಬದಿಯ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button