ಸಜಿಪನಡು ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನದಲ್ಲಿ ಮಂಗಲೋತ್ಸವ…

ಬಂಟ್ವಾಳ: ಅಯೋಧ್ಯಾಧಿಪತಿ ಶ್ರೀರಾಮಚಂದ್ರನ ಶ್ರೀರಾಮ ಮಂದಿರ ನಿರ್ಮಾಣದ ಅಂಗವಾಗಿ ನಿಧಿ ಸಮರ್ಪಣ ಅಭಿಯಾನದ ಜನಜಾಗೃತಿ ಸಮಿತಿ ವತಿಯಿಂದ ಸಜಿಪನಡು ಪಡು ಭಗವದ್ಭಕ್ತರ ಪಾಲ್ಗೊಳ್ಳುವಿಕೆ ಯೊಂದಿಗೆ ಶ್ರೀ ರಾಮ ಭಜನಾ ಮಂದಿರ ಕೋಟೆಕಣಿ, ಶ್ರೀ ವೀರಾಂಜನೇಯ ಭಜನಾ ಮಂಡಳಿ ತಲೆಮೊಗರು ನೇತೃತ್ವದಲ್ಲಿ ಸಜಿಪನಡು ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನದಲ್ಲಿ ಮಂಗಲೋತ್ಸವ ಜರಗಿತು.
ಈ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಪ್ರವಚನ ನೆರವೇರಿಸಿದರು. ಅವರನ್ನು ಫಲತಾಂಬೂಲ ನೀಡಿ ದೇವಳದ ವತಿಯಿಂದ ಸನ್ಮಾನಿಸಲಾಯಿತು. ಸರಕಾರದಿಂದ ಕೊರೋನಾ ಪರಿಹಾರವಾಗಿ ಧಾರ್ಮಿಕ ದತ್ತಿ ಇಲಾಖೆಯ ಸಿ ದರ್ಜೆಯ ದೇವಾಲಯಗಳ ಅರ್ಚಕರಿಗೆ ಬಿಡುಗಡೆಯಾದ 33 ಕೋಟಿ ರೂಪಾಯಿ ಅರ್ಚಕರ ಖಾತೆಗೆ ಜಮಾ ಆಗದೆ ಇರುವ ಬಗ್ಗೆ ಧಾರ್ಮಿಕ ಪರಿಷತ್ ಸದಸ್ಯರಿಗೆ ಮನವಿ ಮಾಡಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ ಸಜಿಪ ಮಾಗಣೆ ತಂತ್ರಿಎಂ ಸುಬ್ರಮಣ್ಯ ಭಟ್ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಸುರೇಶ್ ಬಂಗೇರ ಧನ್ಯವಾದವಿತ್ತರು. ರಾಮಕೃಷ್ಣ ಭಟ್, ಗಣಪತಿ ಭಟ್, ಪ್ರವೀಣ್ ಭಂಡಾರಿ, ಕಿಶನ್ ಶೇಣವ, ರಾಮ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button