ತನ್ಮಯ್ ಎಂ ಕೊಟ್ಟಾರಿ – ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ…

ಬಂಟ್ವಾಳ: ಬೆಂಗಳೂರಿನ ಚೆನ್ನಮ್ಮ ಸ್ಕೇಟಿಂಗ್ ಟ್ರ್ಯಾಕ್ ನಲ್ಲಿ ನ. 16 ಮತ್ತು 17 ರಂದು ನಡೆದ ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ತನ್ಮಯ್ ಎಂ ಕೊಟ್ಟಾರಿ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಸಜಿಪ ಮುನೂರು ಗ್ರಾಮದ ಮೋಹನ ಕೊಟ್ಟಾರಿ ಸುಮಿತ ಕೊಠಾರಿ ದಂಪತಿಗಳ ಪುತ್ರ. ಪ್ರಸ್ತುತ ಮಂಗಳೂರಿನ ಕೆನರಾ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿಹಾಗೂ ಹೈ ಪ್ಲೇಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯ.

Related Articles

Back to top button