ಅರಂತೋಡು- ಎಲ್ಪಕಜೆ ಬಳಿ ಮರ ಬಿದ್ದು ರಸ್ತೆ ಕಡೆ ಎರಡು ಗಂಟೆ ಸಂಚಾರ ಸ್ಥಗಿತ…

ಸುಳ್ಯ: ಅರಂತೋಡು ಗ್ರಾಮದ ಎಲ್ಪಕಜೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರ ಸುಮಾರು 2 ಗಂಟೆ ತನಕ ಸಂಚಾರಕ್ಕೆ ಅಡೆಚಣೆಯಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.
ಸುಮಾರು ಮೂರು ಗಂಟೆ ಹೊತ್ತಿಗೆ ಮರ ಬಿದ್ದಿದೆ. ಸಮೀಪವಿರುವ ಜನಾರ್ಧನ ಮನೆಯವರು ಮರ ಬೀಳುವ ಶಬ್ದದಿಂದ ಎಚ್ಚರಗೊಂಡರು. ವಿನಯ್ ಅವರು ಅರಂತೋಡಿನ ತಾಜುದ್ದೀನ್ ಅರಂತೋಡು ಅವರಿಗೆ ಫೋನ್ ಮಾಡಿ ತಿಳಿಸಿದರು. ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕೃತಿ ವಿಕೋಪ ಸಹಾಯವಾಣಿಗೆ ಕರೆ ಮಾಡಿದರು. ನಂತರ ಅರಂತೋಡಿನ ಸೋಮಶೇಖರ ಪೈಕ ಅವರ ಕ್ರೈನ್ ತಂದು ಮರವನ್ನು ಬದಿಗೆ ಸರಿಸಲಾಯಿತು. ಅದರ ಮುಂಚಿತವಾಗಿ ವಾಹನ ಚಾಲಕರು ಹಗ್ಗವನ್ನು ಮರಕ್ಕೆ ಕಟ್ಟಿ ಪಿಕಪ್ ವಾಹನದ ಮೂಲಕ ಮರವನ್ನು ಬದಿಗೆ ಸರಿಸಲು ಪ್ರಯತ್ನಿಸಿದರು. ರಸ್ತೆ ಉದ್ದಕ್ಕೂ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಪರೀತ ಮಳೆಯ ಮಧ್ಯೆಯೂ ಮರವನ್ನು ಬದಿಗೆ ಸರಿಸಲು ಪ್ರಯತ್ನ ಮಾಡಲಾಯಿತು. ಕ್ರೈನ್ ಬಂದ ಮೇಲೆ ಮರವನ್ನು ತೆರೆವುಗೊಳಿಸಿ ಸುಗಮ ಸಂಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಲಾರಿ ಒಂದು ಅವಸರದಿಂದ ಬಂದು ರಸ್ತೆಯ ಬದಿಯ ಮಣ್ಣಿನಲ್ಲಿ ಹೂತು ಹೋಗಿದ್ದು ಮುಂದೆ ಬರದೆ ಬಾಕಿಯಾದ ಘಟನೆಯಾಗಿದೆ.
ವಿನಯ್ ಎಲ್ಪಕಜೆ , ಸೋಮಶೇಖರ ಪೈಕ, ಶಿವಪ್ರಸಾದ್ ಎಲ್ಪಕಜೆ, ದೀಪಕ್ ಪೈಕ , ತಾಜುದ್ದೀನ್ ಅರಂತೋಡು ಹಾಗೂ ವಾಹನ ಚಾಲಕರು ಸಹಕರಿಸಿದರು.

whatsapp image 2024 06 26 at 6.58.02 am

whatsapp image 2024 06 26 at 6.58.01 am

Sponsors

Related Articles

Back to top button