ದೇವರಗುಂಡ – ನೂತನ ಸಚಿವ ಅಂಗಾರ ಅವರಿಗೆ ಸನ್ಮಾನ…

ಸುಳ್ಯ: ದೇವರಗುಂಡ ಮನೆಯಲ್ಲಿ ಜ. 18 ರಿಂದ 20 ರ ತನಕ ನಡೆದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ, ಪೊಟ್ಟದೈವ, ಗುಳಿಗ ದೈವ ಹಾಗೂ ನಾಗ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ, ನೂತನ ಸಚಿವ ಎಸ್. ಅಂಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ದೇವರಗುಂಡ ಮನೆಯ ಕುಶಾಲಪ್ಪ ಗೌಡ,ದುಗ್ಗಪ್ಪ ಗೌಡ, ಡಿ.ವಿ. ಶಿವರಾಮ, ಡಿ.ಎಸ್. ಗಿರೀಶ್, ಡಿ. ಬಾಲಚಂದ್ರ, ನಾಗೇಶ್ ದೇವರಗುಂಡ, ಸೂರ್ಯ ಡಿ. ವಿ , ಪ್ರದೀಪ್. ಡಿ.ಕೆ, ಡಾಟಿ ಸದಾನಂದ ಗೌಡ, ನವೀನ, ವಿಮಲಾವತಿ, ಸೀತಮ್ಮ ಮತ್ತು ಕುಟುಂಬವರ್ಗದವರು ಉಪಸ್ಥಿತರಿದ್ದರು.
ಸುಳ್ಯ ಬಿಜೆಪಿ ನಾಯಕರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ , ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ ಮೊದಲಾದವರು ಭಾಗವಹಿಸಿದ್ದರು.

5ae15de3 29ec 4bf8 Ad90 00d42a7b17ab 300x225

43592d7f A82b 49f6 A718 Ef049897ce26 300x225

C2ce15d8 3f8b 4594 9df3 1eb5296e755a 300x225

Eb3623dd 6505 43a3 Af84 1f62726ee275 300x225

Related Articles

Leave a Reply

Your email address will not be published. Required fields are marked *