ಮಸ್ಕತ್ ಪ್ರವಾಸ – ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಬೀಳ್ಕೊಡುಗೆ…
![whatsapp image 2024 03 23 at 6.04.14 pm](wp-content/uploads/2024/03/whatsapp-image-2024-03-23-at-6.04.14-pm-758x470.jpeg)
ಸುಳ್ಯ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಸ್ಕತ್ ಪ್ರವಾಸ ಕೈಗೊಳ್ಳುತ್ತಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ, ಕೆಪಿಸಿಸಿ ಮುಖ್ಯ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಬೆಳ್ಳಾರೆ ಮಸೀದಿಯ ಅಧ್ಯಕ್ಷರಾದ ಮಂಗಳ ಅಬೂಬಕ್ಕರ್ ಹಾಜಿ ಶಾಲು ಹೊದಿಸಿ ಗಾಂಧಿನಗರ ಅಲ್ಬಿರ್ ನಿವಾಸದಲ್ಲಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ , ನಗರ ಪಂಚಾಯತ್ ಸದಸ್ಯ ಸಿದ್ದೀಕ್ ಕೊಕೋ,ಹನೀಫ್ ಬೀಜಕೊಚ್ಚಿ, ಶಮೀಯುಲ್ಲ ಮೊದಲಾದವರು ಉಪಸ್ಥಿತರಿದ್ದರು.