ಬೃಹತ್ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ…

ಬಂಟ್ವಾಳ: ಚಿಣ್ಣರಲೋಕ ಸೇವಾ ಬಂಧು (ರಿ) ಬಂಟ್ವಾಳ, ಚಿಣ್ಣರಲೋಕ ಮೋಕೆದ ಕಲಾವಿದರು ಸೇವಾ ಟ್ರಸ್ಟ್ (ರಿ) ಬಂಟ್ವಾಳ,ಹಾಗೂ ಎ. ಜೆ. ವೈದ್ಯಕೀಯ ಮಹಾ ವಿದ್ಯಾಲಯ ಮಂಗಳೂರು ಇದರ ಸಹಯೂಗದೊಂದಿಗೆ ಬೃಹತ್ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪನೋಲಿಬೈಲ್ ಶ್ರೀ ಕೃಷ್ಣಯುವಕ ಮಂಡಲ ವಠಾರದಲ್ಲಿ ಜುಲೈ21 ರಂದು ನಡೆಯಿತು.
ಸರಿ ಸುಮಾರು 172 ಕ್ಕಿಂತಲೂ ಅಧಿಕ ಗ್ರಾಮಸ್ಥರು ಶಿಬಿರದ ಸದುಪಯೋಗವನ್ನು ಪಡೆದರು. ವಿಶೇಷವಾಗಿ ಶಿಬಿರದಲ್ಲಿ ತಪಾಸಣೆಯ ನಂತರ ಮೆಡಿಸಿನ್ ಕೊಡಲಾಯಿತು ಹಾಗೂ ಕಣ್ಣು ತಪಾಸಣೆ ಮಾಡಿದ ಸುಮಾರು 50ಕ್ಕೂಅಧಿಕ ಜನರಿಗೆ ಉಚಿತ ಕನ್ನಡಕ ಕೊಡುವ ವ್ಯವಸ್ಥೆ ಮಾಡಲಾಯಿತು,
ಕಾರ್ಯಕ್ರಮದ ಉದ್ಘಾಟನೆ ಯನ್ನು ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೋಭಾ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಫೌಝಿಯ, ಪಂಚಾಯತ್ ಸದಸ್ಯರಾದ ವಿಶ್ವನಾಥ ಬೆಳ್ಚಡ, ಶ್ರೀಮತಿ ಯಮುನ, ಸೀತಾರಾಮ ಅಗೊಳಿಬೆಟ್ಟು, ಪ್ರಶಾಂತ, ಸೋಮನಾಥ, ಸುಂದರಿ, ಮಾಜಿ ಗ್ರಾಮ ಪಂಚಾಯಿತ್ ಸದಸ್ಯರಾದ ರಮೇಶ್ ಪನೋಲಿಬೈಲು,ಡಾ| ವಾಮನ್ ಪಿ, ಡಾ| ಎಂ ಎಂ ತುಫೈಲ್, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶೈಲೇಶ್ ಪೂಜಾರಿ,ಪನೊಲಿಬೈಲ್ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಶಾರದಾ ಯುವಕ ಮಂಡಲ ಅಧ್ಯಕ್ಷರಾದ ಪರಮೇಶ್ವರ ಎಸ್, ಮತ್ತು ಸದಸ್ಯರಾದ ಸುಂದರ ಕೂಡರಲಚ್ಚಿಲ್,ಆರೋಗ್ಯ ಸೇವಾ ಬಂಧು ಸಂಚಾಲಕರಾದ ಮಲ್ಲಿಕ್ ಕೊಳಕೆ,ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಬ್ರಿಜೇಶ್ ಜೈನ್,ಸಂಸ್ಥೆಯ ಅಧ್ಯಕ್ಷರಾದ ಮೋಹನದಾಸ ಕೊಟ್ಟಾರಿ ಮುನ್ನೂರು, ಸದಸ್ಯರಾದ ವಿಜಯಕುಮಾರ್ ಅಡ್ಯಾರು,ಸುಕೇಶ್ ಶೆಟ್ಟಿ ತುಂಬೆ,ಇಬ್ರಾಹಿಂ ಕೈಲಾರು,ಶಿವಪ್ರಸಾದ್ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.
ಅರೋಗ್ಯಸೇವಾ ಬಂಧು ಸಂಚಾಲಕರಾದ ಅಶೋಕ್ ಶೆಟ್ಟಿ ಸರಪಾಡಿ ಸ್ವಾಗತ ಮಾಡಿ, ಬ್ರಿಜೇಶ್ ಜೈನ್ ವಂದಿಸಿದರು. ಶ್ರೀ ನಿಧಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Sponsors

Related Articles

Back to top button