ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ. ಪಿ. ಉಸ್ತಾದ್ ರಿಗೆ ಟಿ. ಎಂ. ಶಹೀದ್ ರವರಿಂದ ಗೌರವಾರ್ಪಣೆ…

ಸುಳ್ಯ: ವಿಶ್ವವಿಖ್ಯಾತ ಮರ್ಕಸ್ ನಾಲೆಜ್ ಸಿಟಿ ಯ ರೂವಾರಿ, ದ. ಕ, ಕೊಡಗು ಮತ್ತು ಕೇರಳ ರಾಜ್ಯದ ಹಲವು ಮೊಹಲ್ಲಾಗಳ ಖಾಝಿ ಯವರಾದ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದ್ ರವರನ್ನು ಇಂದು ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಹೀದ್ ಗೌರವಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕರ್ನಾಟಕ ಸರ್ಕಾರದ ಕೆಪೆಕ್ ನಿಗಮದ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ಸುಳ್ಯ ನಗರ ಪಂಚಾಯತ್ ಸದಸ್ಯರು ಗಳಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ರಿಯಾಜ್ ಕಟ್ಟೆಕ್ಕಾರ್ಸ್, ಅನ್ಸಾರಿಯ ಸೆಕ್ರೆಟರಿ ಲತೀಫ್ ಹರ್ಲಡ್ಕ ಅನ್ಸಾರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.

whatsapp image 2025 01 30 at 6.15.41 pm (1)

Related Articles

Back to top button