ಶಾಂತಿಲ ಕರಿಯಪ್ಪ ಗೌಡ ನಿಧನ…

ಬಂಟ್ವಾಳ: ಪೆರಾಜೆ ಗ್ರಾಮದ ಶಾಂತಿಲ ನಿವಾಸಿ ಕರಿಯಪ್ಪ ಗೌಡ ಅವರು (80) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಸ್ವಯಂ ಸೇವಕ, ಪೆರಾಜೆ ಯುವಕ ಮಂಡಲದ ಸ್ಥಾಪಕರಲ್ಲಿ ಓರ್ವ, ಶ್ರೀ ವಿಷ್ಣು ಮೂರ್ತಿ ಭಜನಾ ಮಂಡಳಿಯ ಸ್ಥಾಪಕ ಸದಸ್ಯ, ಮಾಣಿ ವಲಯದ ಮಾಜಿ ಪಂಚಾಯತ್ ಬೋರ್ಡ್ ಸದಸ್ಯ, ಭಾರತೀಯ ಜನತಾ ಪಕ್ಷ ಪೆರಾಜೆ ಯ ಹಿರಿಯ ಧುರೀಣ, ಪೆರಾಜೆ ಗೌಡ ಸಮುದಾಯ ದ ಹಿರಿಯ ಮುಖಂಡ, ಪ್ರತಿಷ್ಠಿತ ಶಾಂತಿಲ ಮನೆತನದ ಹಿರಿಯ ಮುಖ್ಯಸ್ಥ ರಾದ ಕರಿಯಪ್ಪ ಗೌಡ ಶಾಂತಿಲ ಇವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.6 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button