ಸಿದ್ದಕಟ್ಟೆ: ಭರತನಾಟ್ಯ-ಸಂಗೀತ ತರಗತಿ ಉದ್ಘಾಟನೆ…

ಸಿದ್ದಕಟ್ಟೆ : ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಸಿದ್ದಕಟ್ಟೆಯಲ್ಲಿ ನಡೆಯುವ ನಿಯೋಜಿತ ಭರತನಾಟ್ಯ-ಸಂಗೀತ ತರಗತಿಗಳನ್ನು ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಇತ್ತೀಚೆಗೆ ಉದ್ಘಾಟಿಸಿದರು.
ಬಹುಮುಖಿ ಸಾಧನೆಗಳನ್ನು ಮಾಡಿರುವ ಅಸದೃಶ ಗುರುಗಳ ಇಲ್ಲಿಗೆ ಲಭ್ಯವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆನೀಡಿ, ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪೂರ್ವಸಚಿವ ಬಿ.ನಾಗರಾಜ ಶೆಟ್ಟಿಯವರು ತನ್ನ ಗುಣಶ್ರೀ ವಿದ್ಯಾಸಂಸ್ಥೆಯ ನೃತ್ಯ -ಸಂಗೀತ ವಿದ್ಯಾರ್ಥಿಗಳ ಶುಲ್ಕವನ್ನು ಟ್ರಸ್ಟ್ ನ ಕಡೆಯಿಂದಲೇ ಭರಿಸುವ ಭರವಸೆ ನೀಡಿದರು.
ಸಂಗಬೆಟ್ಟು ಗ್ರಾ. ಪಂ. ಅಧ್ಯಕ್ಷೆ ರಾಜೀವಿ ಪೂಜಾರಿ ನಾಮಫಲಕ ಅನಾವರಣಗೊಳಿಸಿದರು.
ಸಿದ್ದಕಟ್ಟೆ ಮುಖ್ಯರಸ್ತೆಯ ಫಲ್ಗುಣಿ ವಾಣಿಜ್ಯ ಸಂಕೀರ್ಣದಲ್ಲಿರುವ ನೇತ್ರಾವತಿ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ವಿ|ಶಾರದಾಮಣಿ ಶೇಖರ್ – ಚಂದ್ರಶೇಖರ್ ಕೆ ಶೆಟ್ಟಿ ದಂಪತಿಗೆ ಗುರುವಂದನೆ ಸಲ್ಲಿಸಲಾಯಿತು.
ಶ್ರೀಕ್ಷೇತ್ರ ಪೂಂಜದ ವಿದ್ವಾನ್ ಕೃಷ್ಣಪ್ರಸಾದ್ ಆಚಾರ್ಯ ಮತ್ತು ಪ್ರಕಾಶ್ ಆಚಾರ್ಯ ಶುಭಾಶಂಸನೆಗೈದರು. ಸದ್ದಕಟ್ಟೆ ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಮತ್ತು ಕಟ್ಟಡದ ಮಾಲಕ ದುರ್ಗಾಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ನೃತ್ಯಗುರು, ದೂರದರ್ಶನ ಕಲಾವಿದೆ ವಿ|ಅಯನಾ ವಿ ರಮಣ್ ಪ್ರಾರ್ಥಿಸಿದರು. ಸಂಗೀತ ಗುರು ವಿ|ಕೆ ವಿ ರಮಣ್ ಮಂಗಳೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಹೊಸನದಿ ಗ್ರಾ. ಪಂ. ಪಿಡಿಒ ಗಣೇಶ್ ಶೆಟ್ಟಿ ನಿರೂಪಿಸಿ ವಂದಿಸಿದರು.
80 ಕ್ಕೂ ಅಧಿಕ ನೃತ್ಯ-ಸಂಗೀತ ವಿದ್ಯಾರ್ಥಿಗಳು, ಅವರ ಪಾಲಕರು-ಪೋಷಕರು ಉಪಸ್ಥಿತರಿದ್ದರು.
ನಾಟ್ಯಾಯನ ಕಲಾ ಅಕಾಡೆಮಿಯ ಆಶ್ರಯದಲ್ಲಿ ಪ್ರತೀ ಶನಿವಾರ ಅಪರಾಹ್ನ 3 ರಿಂದ 6 ಗಂಟೆವರೆಗೆ ತಲಾ ಮೂರು ಬ್ಯಾಚ್ ಗಳ ನೃತ್ಯ-ಸಂಗೀತ ತರಗತಿಗಳು ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಚಾಲಕಿ ಡಾ|ಮೂಕಾಂಬಿಕಾ ಜಿ ಎಸ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 8792158946 / 6362973415 ನಂಬರನ್ನು ಸಂಪರ್ಕಿಸಬಹುದಾಗಿದೆ.

whatsapp image 2025 08 23 at 11.06.48 am

whatsapp image 2025 08 23 at 11.06.48 am (1)

whatsapp image 2025 08 23 at 11.23.37 am

whatsapp image 2025 08 23 at 11.23.38 am

 

Related Articles

Back to top button