ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು – ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಬಂಟ್ವಾಳ ಇದರ ಪುನಃಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 9 ರಿಂದ 14 2022ಕ್ಕೆ ಬ್ರಹ್ಮಶ್ರೀ ನೀಲೇಶ್ವರ ಕೆ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದ್ದು, ಆ ಪ್ರಯುಕ್ತವಾಗಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಅ. 10 ರಂದು ಕ್ಷೇತ್ರದ ವಠಾರದಲ್ಲಿ ಬ್ರಹ್ಮಕಲಶೋತ್ಸವದ ಸಮಿತಿ ಅಧ್ಯಕ್ಷ ಪುನುಕೆಮಜಲು ರವೀಂದ್ರ ಭಂಡಾರಿ ಅಧ್ಯಕ್ಷತೆಯಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ, ಸಜೀಪ ಮಾಗಣೆಯ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಮುಂಬೈ ಉದ್ಯಮಿ ಅಶೋಕ ಪಕ್ಕಳ, ಯತೀಶ್ ಭಂಡಾರಿ, ವೆಂಕಟರಮಣ ಭಟ್, ರಮಾ ಎಸ್ ಭಂಡಾರಿ, ನಿತಿನ್ ಅರಸ, ಸುರೇಶ್ ಬಂಗೇರ, ಲಿಂಗಪ್ಪ ದೋಟ, ಹರೀಶ್ ಬಂಗೇರ, ಪ್ರವೀಣ್ ಶೆಟ್ಟಿ, ರಾಮ, ಕಿಶನ್, ಮನಮೋಹನ್, ಭಾಸ್ಕರ, ರಾಮಕೃಷ್ಣ ಭಟ್, ಪ್ರವೀಣ್ ಆಳ್ವ, ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಮತಿ ಸುನೀತಾ ಚಂದ್ರಶೆಟ್ಟಿ ಮಾರ್ನಬೈಲ್ ತೀರ್ಥ ಮಂಟಪದ ಮಾಡಿಗೆ ತಾಮ್ರ ಮುಚ್ಚಿಸುವ ಭರವಸೆಯನ್ನು ನೀಡಿದರು.

Sponsors

Related Articles

Back to top button